ತಿರುವನಂತಪುರ, ಮಂಗಳೂರು -ದಿಲ್ಲಿ: ವಿಶೇಷ ರೈಲು ಸಂಚಾರ – vishwanews24
ತಿರುವನಂತಪುರ, ಮಂಗಳೂರು -ದಿಲ್ಲಿ: ವಿಶೇಷ ರೈಲು ಸಂಚಾರ
ಮಂಗಳೂರು: ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ನಿವಾರಿಸಲು ತಿರುವನಂತಪುರ ಸೆಂಟ್ರಲ್ನಿಂದ ಹ.ನಿಜಾಮುದ್ದೀನ್ ಸ್ಟೇಷನ್ ಗೆ ಏಕಮುಖ ವಿಶೇಷ ರೈಲು ಸಂಚರಿಸಲಿದೆ.
ನಂ.06159 ತಿರುವನಂತಪುರ ಸೆಂಟ್ರಲ್ ಹ.ನಿಜಾಮುದ್ದೀನ್ ರೈಲು ತಿರುವನಂತಪುರದಿಂದ ಡಿ.13ರ ಶನಿವಾರ ಬೆಳಗ್ಗೆ 7.45ಕ್ಕೆ ಹೊರಟು ಸೋಮವಾರ ರಾತ್ರಿ 7 ಗಂಟೆಗೆ ಹ.ನಿಜಾಮುದ್ದೀನ್ ತಲಪಲಿದೆ.
ರೈಲಿನಲ್ಲಿ ಒಂದು ಎ.ಸಿ. ಫಸ್ಟ್ ಕ್ಲಾಸ್ ಕೋಚ್, 5 ಎಸಿ 2 ಟೈರ್, 12 ಎಸಿ 3 ಟೈರ್, 1 ಹಾಟ್ ಬಫೆ ಕಾರ್ ಕೋಚ್, 2 ಜನರೇಟರ್ ಕಾ ಕೋಚ್ಗಳಿರುತ್ತವೆ.
ರೈಲಿಗೆ ಕೊಲ್ಲಂ ಜಂಕ್ಷನ್, ಕಾಯಂಕುಳಂ ಜಂಕ್ಷನ್, ಚೆಂಗನ್ನೂರು, ತಿರುವಲ್ಲ, ಚಂಗನಶೇರಿ, ಕೊಟ್ಟಾಯಂ, ಎರ್ನಾಕುಳಂ ಟೌನ್, ಆಲುವ, ತ್ರಿಶೂರ್, ಉಡುಪಿ, ಕುಂದಾಪುರ, ಬೈಂದೂರು, ಕಾರವಾರ, ಮಡಗಾಂವ್ ಜಂಕ್ಷನ್, ತಿವಿಂ, ರತ್ನಗಿರಿ, ಚಿಪ್ಪುನ್, ಪನ್ವೆಲ್, ವಸಾಯ್ ರೋಡ್, ಉಧಾ° ಜಂಕ್ಷನ್, ವಡೋದರ ಜಂಕ್ಷನ್, ರತ್ನಂ ಜಂಕ್ಷನ್, ಕೋಟ ಜಂಕ್ಷನ್, ಸವಾಯ್ ಮಾಧೋಪುರ್ ಜಂಕ್ಷನ್ ಹಾಗೂ ಮಥುರ ಜಂಕ್ಷನ್ ಗಳಲ್ಲಿ ನಿಲುಗಡೆ ಇದೆ.
