ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಲೆಫ್ಟಿನೆಂಟ್ ಕರ್ನಲ್ ಕೀರ್ತಿಶೇಷ ಅಜಿತ್ ವಿ ಭಂಡಾರ್ಕರ್ ರ ಮಡದಿಯನ್ನು ಭಕ್ತಿಯಿಂದ ಗೌರವಿಸಿ ಸನ್ಮಾನಿಸಿದ ಜಿ.ಎಸ್.ಬಿ ಸಮುದಾಯ:vishwanews24
ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಲೆಫ್ಟಿನೆಂಟ್ ಕರ್ನಲ್ ಕೀರ್ತಿಶೇಷ ಅಜಿತ್ ವಿ ಭಂಡಾರ್ಕರ್ ರ ಮಡದಿಯನ್ನು ಭಕ್ತಿಯಿಂದ ಗೌರವಿಸಿ ಸನ್ಮಾನಿಸಿದ ಜಿ.ಎಸ್.ಬಿ ಸಮುದಾಯ:vishwanews24
ಉಚ್ಚಿಲ: ಜಿ ಎಸ್ ಬಿ ಸಮಾಜ ಹಿತರಕ್ಷಾಣ ವೇದಿಕೆ ಹಾಗೂ ಸಮರ್ಪಣ ಚಾರಿಟೇಬಲ್ ಟ್ರಸ್ಟ್ ಮುದರಂಗಡಿ ಇದರ ವತಿಯಿಂದ ಸಮಾಜ ಬಾಂಧವರಿಗೆ ಉಚ್ಚಿಲದಲ್ಲಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಪ್ರೇರಣಾ ಕಾರ್ಯಗಾರ ವಿದ್ಯಾರ್ಥಿವೇತನ ವಿತರಣೆ ಮತ್ತು ಸಾಧಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಲೆಫ್ಟಿನೆಂಟ್ ಕರ್ನಲ್ ಕೀರ್ತಿಶೇಷ ಅಜಿತ್ ವಿ ಭಂಡಾರ್ಕರ್ ರ ಮಡದಿಯಾದ ಶಕುಂತಲಾ ಭಂಡಾರ್ಕರ್ ಅವರನ್ನು ಅತ್ಯಂತ ಭಕ್ತಿಯಿಂದ ಪೂಜ್ಯಭಾವದಿಂದ ಇಂದು ಜಿ ಎಸ್ ಬಿ ಸಮುದಾಯ ಗೌರವಿಸಿ ಸನ್ಮಾನಿಸಿದರು.
ಶಕುಂತಲಾ ಭಂಡಾರ್ಕರ್ ಅವರನ್ನು ಪುಷ್ಪವೃಷ್ಟಿ-ದೇಶ ಭಕ್ತಿಗೀತೆಯ ಬ್ಯಾಂಡ್ ಸೆಟ್ ನ ಗೌರವದಿಂದ ವೇದಿಕೆಗೆ ಕರೆತಂದು ಇಡೀ ಜಿಎಸ್ ಬಿ ಸಮುದಾಯದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಶಕುಂತಲಾ ಭಂಡಾರ್ಕರ್ ರ ಎರಡು ಮಕ್ಕಳು ಕೂಡ ಇಂದು ಭಾರತೀಯ ಸೇನೆಯಲ್ಲಿ ಸೇವೆ ಮಾಡುತ್ತಿದ್ದು ಒರ್ವ ಮಗ ಅಕ್ಷಯ ನೌಕ ಪಡೆಯಲ್ಲಿ ಲೆಫ್ಟಿನೆಂಟ್ ಕರ್ನಲ್,ಮತ್ತೊಂದು ಪುತ್ರ ನಿರ್ಭಯ ದಿಲ್ಲಿಯಲ್ಲಿ ಮೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತನ್ನ ಇಬದಬರೂ ಮಕ್ಕಳನ್ನು ಈ ಪುಣ್ಯ ಭರತಭೂಮಿಯ ರಕ್ಷಣೆಗಾಗಿ ಸೇವೆ ಮಾಡಲು ನೀಡಿರುವ ಆ ಮಹಾತಾಯಿಗೆ ಇಂದು ಉಚ್ಚಿಲ್ಲಿ ನಡೆದ ಗೌರವ ಸಮರ್ಪಣೆ ಸೇರಿದ ಜನಸ್ತೋಮದಲ್ಲಿ ಕಣ್ಣೀರು ಹಾಕುವಂತೆ ಮಾಡಿತ್ತು.
