ದೇಶದಲ್ಲಿ ಭಯೋತ್ಪಾದನೆ ಕೊನೆಯಾಗಲು ಪ್ರಾರ್ಥನೆ ಸಲ್ಲಿಸೋಣ : ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು -Vishwanews24

Featured, ಉಡುಪಿ

ಉಡುಪಿ: ಕಂಸ ಜಗತ್ತಿನ ಮೊದಲ ಉಗ್ರಗಾಮಿಯಾಗಿದ್ದು ನಮ್ಮೊಳಗಿನ ಕೆಟ್ಟ ಕಾಮನೆಗಳೇ ಕಂಸ. ಕೃಷ್ಣ ದೇವರು ಇದನ್ನು ಸಂಹರಿಸಬೇಕು. , ಕೃಷ್ಣಾರ್ಘ್ಯ ಸಂದರ್ಭ ದೇಶದಲ್ಲಿ ಭಯೋತ್ಪಾದನೆ ಕೊನೆಯಾಗಲು ಪ್ರಾರ್ಥನೆ ಸಲ್ಲಿಸೋಣ ಎಂದು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು.

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಜಾಹಿರಾತು

ದೇವರು ಬಯಸಿದ್ದನ್ನು ನೀಡಲು ಸಮರ್ಥ ದೇವರಿಗೆ ಸಾವಿರ ಕೈ. ಆದರೆ ನಮಗಿರುವುದು ಎರಡೇ ಕೈ. ಹಾಗಾಗಿ ದೇವರು ಕೊಡಲು ಶುರು ಮಾಡಿದರೆ ಪಡೆಯುವ ಸಾಮರ್ಥ್ಯ ಮನುಷ್ಯರಲ್ಲಿ ಇಲ್ಲ. ಕೆಲ ತಿಂಗಳ ಹಿಂದೆ ತೀವ್ರ ನೀರಿನ ಕೊರತೆ ಉಂಟಾಗಿತ್ತು. ಎಲ್ಲರೂ ಎಲ್ಲರೂ ನೀರು ಬೇಕು ಎಂದು ಪ್ರಾರ್ಥಿಸಿದರು. ಈಗ ನಿರಂತರ ಮಳೆ ಸುರಿಯುತ್ತಿದೆ, ಮಳೆ ಸಾಕು ಎಂಬ ಪರಿಸ್ಥಿತಿ ಇದೆ. ಹೀಗಾಗಿ ನಮಗೆ ಯಾವಾಗ ಏನು ಬೇಕೋ ಅದನ್ನು ನೀಡು ಎಂದು ಪ್ರಾರ್ಥಿಸೋಣ ಎಂದರು.