ದೇಶಾದ್ಯಂತ ಇಂದು ಮುಸ್ಲಿಂ ಬಾಂಧವರ ಈದ್ ಸಂಭ್ರಮಾಚರಣೆ -Vishwanews24
ನವದೆಹಲಿ: ದೇಶಾದ್ಯಂತ ಇಂದು ಮುಸ್ಲಿಂ ಬಾಂಧವರು ಈದ್ ಸಂಭ್ರಮಾಚರಣೆಯಲ್ಲಿದ್ದಾರೆ. ಬುಧವಾರ ಬೆಳಿಗ್ಗೆ, ಜನರು ದೇಶದ ವಿವಿಧ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಿದ್ದಾರೆ. ಸಹೋದರ-ಸಹೋದರಿಯರಿಗೆ ಶುಭ ಕೋರುತ್ತಿದ್ದಾರೆ.
ಒಂದು ತಿಂಗಳ ಪವಿತ್ರ ರಂಜಾನ್ ಉಪವಾಸ ತಿಂಗಳನ್ನು ಶ್ರದ್ಧೆಯಿಂದ ಆಚರಿಸಿ, ಇದು ಉಪವಾಸ ಬಿಟ್ಟು ಸಂಭ್ರಮದಿಂದ ಹಬ್ಬವನ್ನು ಆಚರಿಸಲಿದ್ದಾರೆ.
ಈ ಸಂದರ್ಭದಲ್ಲಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ದೇಶದ ಎಲ್ಲಾ ಮುಸ್ಲಿಂ ಬಾಂಧವರಿಗೆ ಈದ್ ಶುಭಾಶಯ ಕೋರಿ ‘ರಂಜಾನ್ ಪವಿತ್ರ ಮಾಸ ಕೊನೆಗೊಳ್ಳುವ ಈ ಉತ್ಸವವು ನಮ್ಮ ಧರ್ಮ, ಸಹೋದರತ್ವ ಮತ್ತು ದಯೆ ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ. ಈ ದಿನ ನಾವು ನಮ್ಮ ನಾಗರಿಕತೆಯನ್ನು ಪ್ರತಿಬಿಂಬಿಸುವ ಶಾಶ್ವತ ಮೌಲ್ಯಗಳಿಗೆ ನಮ್ಮನ್ನು ನಾವೇ ಅರ್ಪಿಸಿಕೊಳ್ಳಬೇಕು’ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇಂಗ್ಲಿಷ್ ಮತ್ತು ಉರ್ದುವಿನಲ್ಲಿ ಗ್ರೀಟಿಂಗ್ ಮೂಲಕ ವಿಶ್ ಮಾಡಿ ಈ ವಿಶೇಷ ದಿನ ಸಮಾಜದಲ್ಲಿ ಸಾಮರಸ್ಯ, ಶಾಂತಿ ಬೆಳೆಸಲಿ. ಎಲ್ಲರೂ ಸಂತೋಷದಿನ ಬಳಿ ಎಂದು ಹಾರೈಸಿದ್ದಾರೆ.
