ಧರ್ಮದ ವಿಚಾರವಾಗಿ ಪೇಜಾವರ ಶ್ರೀಗಳನ್ನು ನಿಂದಿಸುವ ಯಾವ ಯೋಗ್ಯತೆಯನ್ನೂ ನೀವು ಉಳಿಸಿಕೊಂಡಿಲ್ಲ : ಎಂ.ಬಿ.ಪಾಟೀಲ್ ವಿರುದ್ಧ ಶಾಸಕ ರಘುಪತಿ ಭಟ್ -Vishwanews24
ಉಡುಪಿ: ಪೇಜಾವರ ಶ್ರೀಗಳ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಎಂ.ಬಿ.ಪಾಟೀಲ್, ಮೊದಲು ತಮ್ಮ ಮಠಗಳಲ್ಲಿರುವ ಹುಳುಕುಗಳನ್ನು ಮುಚ್ಚಕೊಳ್ಳಲಿ. ಬೇರೆ ಧರ್ಮಗಳಲ್ಲಿ ಕಡ್ಡಿ ಆಡಿಸುವುದು ನಿಲ್ಲಿಸಲಿ ಎಂದು ಉಡುಪಿ ಶಾಸಕ ರಘುಪತಿ ಭಟ್ ಕಿಡಿಕಾರಿದ್ದರು.
ಈ ಹೇಳಿಕೆಗೆ ಟ್ವೀಟರ್ ಮೂಲಕ ತಿರುಗೇಟು ನೀಡಿರುವ ರಘುಪತಿ ಭಟ್, ಮಾಜಿ ಸಚಿವರಾದ ಎಂಬಿ ಪಾಟೀಲರೇ, ಧರ್ಮದ ವಿಚಾರವಾಗಿ ಪೇಜಾವರ ಶ್ರೀಗಳನ್ನು ನಿಂದಿಸುವ ಯಾವ ಯೋಗ್ಯತೆಯನ್ನೂ ನೀವು ಉಳಿಸಿಕೊಂಡಿಲ್ಲ. ರಾಜಕೀಯ ಸ್ವಾರ್ಥಕ್ಕಾಗಿ ಧರ್ಮವನ್ನು ಒಡೆಯಲು ಮುಂದಾದವರು ನೀವು. ನೀವು ಎಷ್ಟು ಬೊಬ್ಬಿರಿದರೂ ಧರ್ಮ ಒಡೆದ ಪಾಪ ನಿಮ್ಮನ್ನು ಎಂದಿಗೂ ಬಿಡೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೀರಶೈವರು ಹಾಗೂ ಲಿಂಗಾಯಿತರು ಹಿಂದೂಗಳೇ ಆಗಿದ್ದಾರೆ. ಇಬ್ಬರೂ ಬೇರೆಯಲ್ಲ. ಅನೇಕ ಸಂಪ್ರದಾಯಗಳ ಸಮ್ಮಿಲನವೇ ಒಂದು ಹಿಂದೂ ಧರ್ಮ ಎಂದು ಹೇಳಿದ್ದ ಪೇಜಾವರ ಶ್ರೀಗಳು, ಈ ವಿಚಾರವಾಗಿ ನಿವೃತ್ತ ಐಎಎಸ್ ಅಧಿಕಾರಿ ಎಸ್ ಎಂ ಜಾಮದಾರ, ಸಾಣೀಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ, ಮಾಜಿ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ಪ್ರತ್ಯೇಕ ಲಿಂಗಾಯತ ಧರ್ಮ ಸಮರ್ಥಕರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧವಿರುವುದಾಗಿ ತಿಳಿಸಿದ್ದರು.
