ನನ್ನ ತಮ್ಮನ ಮಗನ ಅಪಹರಣ ಮಾಡಲಾಗಿದೆ, ಇದೊಂದು ಯೋಜಿತವಾಗಿ ನಡೆದ ಕಿಡ್ನಾಪ್: ರೇಣುಕಾಚಾರ್ಯ – Vishwanews24
ನನ್ನ ತಮ್ಮನ ಮಗನ ಅಪಹರಣ ಮಾಡಲಾಗಿದೆ, ಇದೊಂದು ಯೋಜಿತವಾಗಿ ನಡೆದ ಕಿಡ್ನಾಪ್: ರೇಣುಕಾಚಾರ್ಯ
ದಾವಣಗೆರೆ : ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಸೋದರ ಪುತ್ರ ನಾಪತ್ತೆ ಪ್ರಕರಣದ ಕುರಿತಂತೆ ಶಾಸಕ ರೇಣುಕಾಚಾರ್ಯ ಸ್ಪೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರಶೇಖರ್ ನಾಪತ್ತೆಯಾಗಿಲ್ಲ. ಅವನ್ನು ಅಪಹರಣ ಮಾಡಲಾಗಿದೆ. ಇದೊಂದು ಯೋಜಿತವಾಗಿ ನಡೆದ ಕಿಡ್ನಾಪ್ ಎಂಬುದು ಖಚಿತ. ಅಪಹರಣದ ಮಾಹಿತಿಗಳು ನನಗೆ ಬರುತ್ತಿವೆ. ಚಂದ್ರಶೇಖರ್ ನಾಪತ್ತೆಯಾಗಿ ಇಂದಿಗೆ 5 ದಿನಗಳು ಕಳೆದಿವೆ. ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಉದ್ದೇಶಪೂರ್ವಕವಾಗಿಯೇ ಚಂದ್ರಶೇಖರ್ ಅಪಹರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮಾಜಿ ಸಂಸದ ಮುದ್ದಹನುಮೇಗೌಡ, ನಟ ಶಶಿಕುಮಾರ್ ಬಿಜೆಪಿ ಸೇರ್ಪಡೆ – Vishwanews24
ಚಂದ್ರಶೇಖರ್ ನಾಪತ್ತೆಯಾಗಿ 5 ದಿನವಾದ್ರೂ ಚಂದ್ರಶೇಖರ್ ಬಗ್ಗೆ ಸುಳಿವು ಸಿಕ್ಕಿಲ್ಲ. ಚಂದ್ರಶೇಖರ್ ನಾಪತ್ತೆಯಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ, ಅಣ್ಣನ ಮಗ ನಾಪತ್ತೆಯಾದ ಶಾಸಕ ರೇಣುಕಾಚಾರ್ಯ ಕಣ್ಣೀರು ಹಾಕಿದ್ದಾರೆ.
