ನರಸತ್ತ ಕಾಪು ಪುರಸಭೆ ಪ್ರಖ್ಯಾತ ಹೋಟೆಲುಗಳ ತ್ಯಾಜ್ಯ ನೀರು ಒಳಚರಂಡಿ ಸೇರುತ್ತಿದೆ : vishwanews24
ನರಸತ್ತ ಕಾಪು ಪುರಸಭೆ ಪ್ರಖ್ಯಾತ ಹೋಟೆಲುಗಳ ತ್ಯಾಜ್ಯ ನೀರು ಒಳಚರಂಡಿ ಸೇರುತ್ತಿದೆ : vishwanews24
ಚರಂಡಿಯ ಇಕ್ಕೆಲದಲ್ಲಿ ಕಾಂಡೋಮ್ ತೇಲುತ್ತಿದೆ,ಮೀನುಮಾಂಸ ತ್ಯಾಜ್ಯ ಹೊರ ಬರುತ್ತಿದೆ,ಬೀದಿ ನಾಯಿ ಕಾಯುತ್ತಿದೆ!!
ಅಧಿಕಾರ ವರ್ಗ ಮಾತ್ರ ಬೆಚ್ಚಗೆ ಸೊಳ್ಳೆ ಪರದೆ ಹಾಕಿ ಮಲಗಿದೆ..!!!
ಕಾಪು : ಇಲ್ಲಿನ ಪುರಸಭೆಯ ಅಧಿಕಾರಿಗಳಿಗೆ ಯಾಕೋ ಹವಾನಿಯಂತ್ರಿತ ಕೊಠಡಿ ಬಿಟ್ಟು ಹೊರಗೆ ಬರಲು ಮನಸ್ಸಿಲ್ಲ ಕಾಣುತ್ತಿದೆ ಹಾಗಾಗಿ ಪ್ರಖ್ಯಾತ ಹೋಟೆಲ್ ಲಾಡ್ಜುಗಳ ತ್ಯಾಜ್ಯ ನೀರು ಹದಗೆಟ್ಟ ಒಳಚರಂಡಿಯಲ್ಲಿ ಹರಿದು ಶೈಕ್ಷಣಿಕ ಬೀಡು, ದೇಗುಲದ ನಾಡು,ಪ್ರವಾಸೋದ್ಯಮ ಕೇಂದ್ರವಾದ ಕಾಪು ನಗರ ಗಬ್ಬು ನಾರುತ್ತಿದೆ..
ಒಳಚರಂಡಿಯಲ್ಲಿನ ನೀರು ಹೊರಬಂದು ಕಾಂಡೋಮ್ ಗಳು ಮೀನಿನಂತೆ ತೇಲಾಡುತ್ತಿದೆ,ಮೂಳೆ ಮಾಂಸಗಳ ತ್ಯಾಜ್ಯ ಚರಂಡಿಯ ಇಕ್ಕೆಲಗಳಲ್ಲಿ ತಲೆ ಎತ್ತಿ ನಾನು ಹೊರಗೆ ಬರಲೇ ಅನ್ನುತ್ತಿದೆ ಇಷ್ಟೆಲ್ಲಾ ಆದರೂ ಮಾತ್ರ ಕಾಪು ಪುರಸಭೆಯ ಅಧಿಕಾರಿಗಳು ತಾವೂ ಕುಳಿತಿರುವ ಖುರ್ಚಿಗೆ ಕಾವು ನೀಡುತ್ತಿದ್ದಾರೆ.
ತ್ಯಾಜ್ಯ ನಿರ್ವಹಣೆಯೊಂದು ಬಿಟ್ಟರೆ ಕಾಪು ಪುರಸಭೆ ಏನು ಮಾಡುತ್ತಿದೆಂಬ ಪ್ರಶ್ನೆಗೆ ಉತ್ತರ ಇದುವರೆಗೂ ಸಿಕ್ಕಿಲ್ಲ,ಹೋಟೆಲುಗಳು ಅನಾಚರಕ್ಕೆ ಕೊನೆಯಿಲ್ಲ ,ಪುರಸಭೆಯದಂತೂ ಸುದ್ದಿಯೇ ಇಲ್ಲದಂತಾಗಿದೆ.
ಕತ್ತಲೆಯಾದರೇ ಸಾಕು ಇಡೀ ಕಾಪು ನಗರ,ವೇಗದೂತ ಬಸ್ಸು ನಿಲ್ದಾಣದ ಸುತ್ತಲೂ ಗಬ್ಬು ವಾಸನೆ ಮೂಗಿಗೆ ಬಡಿದು ವಾಸನೆ ಗ್ರಹಿಸುವ ನರವೇ ಸತ್ತು ಹೋಗಿದೆ,ಸೊಳ್ಳೆಗಳು ರಾಜರೋಷವಾಗಿ ರಕ್ತ ಹೀರುತ್ತಿದೆ,ಬೀದಿ ನಾಯಿಗಳು ಚರಂಡಿಯ ಇಕ್ಕೆಲದಲ್ಲಿ ಹೊರಬರುವ ಮೂಳೆ ಮಾಂಸಕ್ಕೆ ಕಾಯುತ್ತಿದ್ದೆ ಅಧಿಕಾರ ವರ್ಗ ಬೆಚ್ಚಗೆ ಮನೆಯಲ್ಲಿ ಮಲಗಿದ್ದಾರೆ.
ವಿಪರ್ಯಾಸವೆಂದರೆ ಕೋಟಿಗಟ್ಟಲೆ ಹಣ ಪುರಸಭೆಗೆ ತಂದು ಹಾಕಿದ್ದೇವೆ ಅನ್ನುತ್ತಿದ್ದಾರೆ ಕಾಂಗ್ರೆಸ್ ಬಿಜೆಪಿ ನಾಯಕರುಗಳು ಆ ಕೋಟಿಯಲ್ಲಿ ಈ ಲೆಕ್ಕಾಚಾರ ತಪ್ಪಿ ಹೋಗಿದೆಯೋ ಅಥವಾ ಗಬ್ಬು ನಾತದ ಲೆಕ್ಕಾಚಾರ ಗೊತ್ತಿದ್ದರೂ ಅಧಿಕಾರಿಗಳು “ಕುರುಡು ಕಾಂಚನಾ” ಕ್ಕೆ ಬಲಿಯಾಗುತ್ತಿದ್ದರೋ ಗೊತ್ತಿಲ್ಲ ಒಟ್ಟಾರೆ ಕಾಪು ನಗರ ವಾಸನೆಗೀಡಾಗಿದೆ.
