ನಾನು ಜೆಡಿಎಸ್ ಗೂ ಹೋಗಲ್ಲ, ಪಕ್ಷೇತರನೂ ನಿಲ್ಲಲ್ಲ ಕಾಂಗ್ರೇಸ್ ನನಗೆ ಬಿ ಫಾರಮ್ ನೀಡುತ್ತೆ: ಮುನಿಯಾಲ್ ಉದಯ್ ಶೆಟ್ಟಿ vishwanews24 exclisive

Featured, ಉಡುಪಿ

ಕಾರ್ಕಳ: ಹೌದು ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮುನಿಯಾಲ್ ಉದಯ್ ಶೆಟ್ಟಿಗೆ ಕಡೆಗೂ ಟಿಕೆಟ್ ಮಿಸ್ಸ್ ಆಗಿದೆ.ಗೋಪಾಲ ಭಂಡಾರಿಯವರ ಹೆಸರು ನಿನ್ನೆ ಘೋಷನೆಯಾದ ಬೆನ್ನಲೆ ಉದಯ್ ಅಭಿಮಾನಿಗಳು ರೊಚ್ಚಿಗೆದ್ದು ವಿರಪ್ಪ ಮೊಯ್ಲಿ ಧಿಕ್ಕಾರ ಹಾಕುತ್ತ ಪ್ರತಿಭಟನೆ ಮಾಡಿದರು.

ಆದರೇ ಶೆಟ್ರು ಮಾತ್ರ ಯಾವುದೇ ಗಡಿಬಿಡಿಯಾಗದೇ ” ಕಾಂಗ್ರೆಸ್ ಹೈಕಾಮಂಡ್ ಅಭ್ಯರ್ಥಿಗಳ ಹೆಸರನ್ನು ಮಾತ್ರ ಘೋಷಣೆ ಮಾಡಿರುವಂತದು. ಮತ್ತು ಗೆಲ್ಲುವವರಿಗೆನೆ ಕಾಂಗ್ರೆಸ್ ಟಿಕೆಟ್ ನೀಡುತ್ತೆ ,ಮತ್ತು ನನಗೆ ಖಂಡಿತವಾಗಿಯೂ ಪಕ್ಷದ ಹಿರಿಯರ ಮೇಲೆ, ಹೈಕಾಮಂಡ್ ಮೇಲೆ ಭರವಸೆಯಿದೆ ಏನಾದರೂ ಬದಲಾವಣೆ ಮಾಡಿ ನನಗೆ ಬಿ ಫಾರಮ್ ನೀಡುತ್ತೆ ಎಂದರು.ಮತ್ತು ನಾನು ಜೆಡಿಎಸ್ ಅಥವಾ ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲುವುದಿಲ್ಲ , ನಾನು ಏನಿದ್ದರೂ ಕಾಂಗ್ರೆಸ್ ನ ಅಭ್ಯರ್ಥಿ ಎಂದು ಅವರು ಹೇಳಿದರು”