ನಾಳೆ ಕೈಪುಂಜಾಲು ಮೀನುಗಾರರ ಪ್ರಾ.ವಿವಿಧೋದ್ದೇಶ ಸಹಕಾರ ಸಂಘದ ಶತಮನೋತ್ಸವ ಸಮಾರೋಪ ಸಮಾರಂಭ:vishwanews24
ನಾಳೆ ಕೈಪುಂಜಾಲು ಮೀನುಗಾರರ ಪ್ರಾ.ವಿವಿಧೋದ್ದೇಶ ಸಹಕಾರ ಸಂಘದ ಶತಮನೋತ್ಸವ ಸಮಾರೋಪ ಸಮಾರಂಭ:vishwanews24
ಕಾಪು: ರಾಜ್ಯ ಮತ್ತು ಜಿಲ್ಲಾ ಮಟ್ಟದ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ ಪುರಸ್ಕೃತ ಕೈಪುಂಜಾಲು ಮೀನುಗಾರರ ಪ್ರಾಥಮಿಕ ವಿವಿಧೋದ್ದೇಶ ಸಹಕಾರ ಸಂಘ ನಿ ಕಾಪು ಇದರ ಶತಮನೋತ್ಸವ ಸಮರೋಪವು ಕೋವಿಡ್ ನಿಯಮಗಳ ಅನುಸಾರ ಕೈಪುಂಜಾಲು ಕೇಂದ್ರ ಕಚೇರಿಯ ಬಳಿ ನಾಳೆ ಮಂಗಳವಾರ ಸಂಜೆ ೪ ಗಂಟೆಗೆ ನಡೆಯಲಿದೆ.
ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶತಮನೋತ್ಸವ ಸಮಿತಿ ಸಂಚಾಲಕ ಸತೀಶ್ ಕುಂದರ್ ಅಧ್ಯಕ್ಷತೆ ವಹಿಸುವರು.ಮುಖ್ಯ ಅತಿಥಿಗಳಾಗಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಕೆ.ರಘುಪತಿ ಭಟ್,ದ,ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ , ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್,ವಿನಯ್ ಕುಮಾರ್ ಸೊರಕೆ,ದ.ಕ ಮತ್ತು ಉಡುಪಿ ಜಿಲ್ಲಾ ಮೀನಿ ಮಾರಾಟ ಫೇಡರೇಷನ್ ಅಧ್ಯಕ್ಷ ಯಶ್ಪಾಲ್ ಸುವರ್ಣ,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ,ಮೊದಲಾದ ಗಣ್ಯರು ಉಪಸ್ಥಿತರಿರುವರು.
ಅಪರಾಹ್ನ ೩ ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು,ಸಾಧಕರಿಗೆ ಸನ್ಮಾನ ನಡೆಯಲಿದೆ ಎಮದು ಸಂಘದ ಅಧ್ಯಕ್ಷ ಜನಾರ್ಧನ ಸಾಲಿಯಾನ್,ಉಪಾಧ್ಯಕ್ಷ ಸುಧರ್ಮ ಶ್ರೀಯಾನ್,ಪ್ರಧಾನ ವ್ಯವಸ್ಥಾಪಕ ಜಗದೀಶ ವಿ ತಿಂಗಳಾಯ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
\




