ನಿರೀಕ್ಷೆಯಿಲ್ಲದೆ ಜೀವನದಲ್ಲಿ ಏನಾದರೂ ಮಾಡಬೇಕು : ಅಣ್ಣಾಮಲೈ -Vishwanews24
ಬೆಂಗಳೂರು: ಅಣ್ಣಾಮಲೈ, ರಾಜಕೀಯವೂ ಸೇರಿದಂತೆ ಯಾವುದಾದರೊಂದು ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುವುದಾಗಿ ಹೇಳಿದ್ದಾರೆ.
ಭಾರತೀಯ ಪೊಲೀಸ್ ಸೇವೆ ಬಗ್ಗೆ ಅತ್ಯಂತ ಗೌರವವಿದೆ. ನಮ್ಮ ರಾಷ್ಟ್ರಕ್ಕೆ ಪೊಲೀಸರು ನಿಜವಾದ ಫಿಲ್ಲರ್. ಆದರೆ, ಹೊಸ ಸವಾಲು ಸ್ವೀಕರಿಸುವ ಅಗತ್ಯವಿದೆ ಅನ್ನಿಸಿತು. ಇದರ ಹೊರಗಡೆಯೂ ಏನಾದರೂ ಮಾಡಬಹುದು ಅನ್ನಿಸಿತು. ಎಲ್ಲಾ ವೇಳೆಯಲ್ಲೂ ಸರ್ಕಾರದಿಂದಲೂ ಮಾಡಬೇಕಾದ ಅಗತ್ಯವಿರುವುದಿಲ್ಲ ,ನನ್ನಗೆ ಸರಿ ಎನ್ನಿಸಿದನ್ನು ಮಾಡಲು ಬದ್ಧವಿರುವುದಾಗಿ ಸಂಡೇ ಎಕ್ಸ್ ಪ್ರೆಸ್ ಪ್ರತಿಕ್ರಿಯಿಸಿದ್ದಾರೆ.
ಬಿಕೆ ಶಿವರಾಮ್ , ಅಬ್ದುಲ್ ಅಜೀತ್ ಮತ್ತಿತರ ಅಧಿಕಾರಿಗಳು ಪೊಲೀಸ್ ವೃತ್ತಿಗೆ ರಾಜೀನಾಮೆ ನೀಡಿ ರಾಜಕೀಯ ಸೇರಿದರು. ಆದರೆ, ರಾಜಕೀಯ ಸಮುದ್ರದಲ್ಲಿ ಗುರಿ ಮುಟ್ಟುವಲ್ಲಿ ವಿಫಲರಾದರು. ಅದರಲ್ಲಿ ಅನೇಕ ಸಮಸ್ಯೆಗಳಿವೆ. ಸಾಧ್ಯತೆಗಳ ಬಗ್ಗೆಯೂ ನೋಡಿದ್ದೇನೆ. ನಿರೀಕ್ಷೆಯಿಲ್ಲದೆ ಜೀವನದಲ್ಲಿ ಏನಾದರೂ ಮಾಡಬೇಕು ಎಂಬುದರಲ್ಲಿ ಯಾವಾಗಲೂ ನಂಬಿಕೆ ಇಟ್ಟಿದ್ದೇನೆ. ಫಲಿತಾಂಶ ಹೊರಬರಲಿದೆ. ಸದ್ಯಕ್ಕೆ ಪುಸ್ತಕ ಬರೆಯುತ್ತಿದ್ದೇನೆ. 2020ರ ಆರಂಭದ ತಿಂಗಳುಗಳಲ್ಲಿ ಇದು ಪ್ರಕಟವಾಗಲಿದೆ ಎಂದು ಅಣ್ಣಾಮಲೈ ತಿಳಿಸಿದರು.
