ಪಕ್ಷದ ತೀವ್ರ ಹಿನ್ನಡೆಯಿಂದ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಮತ್ತು ಕಾರ್ಯಕರ್ತರಿಗೆ ತೀವ್ರ ಬೇಸರವಾಗಿದೆ : ರಾಜ್ಬಬ್ಬರ್ -Vishwanews24
ಲಕ್ನೋ,- ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷದ ತೀವ್ರ ಹಿನ್ನಡೆಯಿಂದ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಮತ್ತು ಕಾರ್ಯಕರ್ತರಿಗೆ ತೀವ್ರ ಬೇಸರವಾಗಿದೆ ಎಂದು ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜ್ಬಬ್ಬರ್ ವಿಷಾದಿಸಿದ್ದಾರೆ.
ರಾಹುಲ್ ಅವರು ಅಮೇಥಿ ಲೋಕಸಭಾ ಕ್ಷೇತ್ರವನ್ನು ತಮ್ಮ ಕುಟುಂಬವೆಂದು ಪರಿಗಣಿಸಿದರೂ ಈ ಕ್ಷೇತ್ರಕ್ಕಾಗಿ ಅನೇಕ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರು. ಆದರೆ, ಈ ಕ್ಷೇತ್ರದ ಜನರು ಇಂತಹ ತೀರ್ಪು ನೀಡಿರುವುದರಿಂದ ಕಾಂಗ್ರೆಸ್ ಅಧ್ಯಕ್ಷರಿಗೆ ತೀವ್ರ ನೋವಾಗಿದೆ ಎಂದು ರಾಜ್ಬಬ್ಬರ್ ಬೇಸರಿಸಿದರು.
ಚುನಾವಣಾ ಫಲಿತಾಂಶದ ನಂತರ ಇದೇ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಹಿರಿಯ ನಟ ಬಬ್ಬರ್ ಅಮೇಥಿ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ಗೆ ಉಂಟಾಗಿರುವ ಸೋಲಿನಿಂದ ರಾಹುಲ್ ಅವರ ಮನಸ್ಸಿಗೆ ತುಂಬಾ ನೋವಾಗಿದೆ ಮತ್ತು ಕಾರ್ಯಕರ್ತರಿಗೆ ಅತೀವ ಬೇಸರವಾಗಿದೆ ಎಂದರು.
ರಾಹುಲ್ ಅವರು ವಯನಾಡ್ ಕ್ಷೇತ್ರದಿಂದ ಜಯ ಸಾಧಿಸಿದ್ದಾರೆ ನಿಜ. ಆದರೆ, ತಾವು ಕುಟುಂಬವೆಂದು ಭಾವಿಸಿದ್ದ ಅಮೇಥಿಯಲ್ಲಿ ಸೋಲುಂಟಾಗಿರುವುದಕ್ಕೆ ಅವರಿಗೆ ತುಂಬಾ ದುಃಖವಾಗಿದೆ ಎಂದರು.
