ಪಟಾಕಿ ದುರಂತ ; 21 ರ ಯುವತಿ ದಾರುಣ ಸಾವು ..

Featured, ಜಿಲ್ಲೆ

ತುಮಕೂರು: ಗಣೇಶ ಉತ್ಸವ ನೋಡಲು ಹೋದ ಯುವತಿ ಪಟಾಕಿಗೆ ಮೃತಪಟ್ಟ ಘಟನೆ ತುಮಕೂರು ಜಿಲ್ಲೆ ತಿಪಟೂರು ನಗರದಲ್ಲಿ ನಡೆದಿದೆ.

ಗಣೇಶೋತ್ಸವದ ಸಂಭ್ರಮದ ವೇಳೆ ಭಾರೀ ಪ್ರಮಾಣದಲ್ಲಿ ಸುಡುಮದ್ದನ್ನು ಸಿಡಿಸಲಾಗುತ್ತಿತ್ತು. ಈ ವೇಳೆ ಪಟಾಕಿಯೊಂದು ಸಿತಾರಾ ಎನ್ನುವ ಯುವತಿಯ ತಲೆಯ ಮೇಲೆ ಬಿದ್ದು ಸಿಡಿದಿದೆ.

ಗಂಭೀರವಾಗಿ ಗಾಯಗೊಂಡ ಸಿತಾರಾರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಲಾಯಿತಾದರೂ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.

ತಿಪಟೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

vishwanews24