ಪಡುಬಿದ್ರಿ: ಜ.7ರಂದು ಜನ್ಮಭೂಮಿ ಜನ ಸೇವಾ ಟ್ರಸ್ಟ್ ಉದ್ಘಾಟನೆ – Vishwanews24
ಪಡುಬಿದ್ರಿ: ಜ.7ರಂದು ಜನ್ಮಭೂಮಿ ಜನ ಸೇವಾ ಟ್ರಸ್ಟ್ ಉದ್ಘಾಟನೆ
ಪಡುಬಿದ್ರಿ: ಉಡುಪಿ ಜನ್ಮಭೂಮಿ ಜನ ಸೇವಾ ಟ್ರಸ್ಟ್ ಉದ್ಘಾಟನಾ ಸಮಾರಂಭ ಕಾಪು ಜನಾರ್ದನ ದೇವಸ್ಥಾನ ಸಭಾಭವನದಲ್ಲಿ ಜ.7ರಂದು ಸಂಜೆ 4 ಗಂಟೆಗೆ ನಡೆಯಲಿದೆ.
ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ದೀಪ ಪ್ರಜ್ವಲಿಸಿ ಆಶೀರ್ವಚನ ನೀಡುವರು. ವಾಗಿ ಶ್ರೀಕಾಂತ ಶೆಟ್ಟಿ ಪ್ರಮುಖ ಭಾಷಣ ಮಾಡಲಿದ್ದು, ಉದ್ಯಮಿ ಸಂದೀಪ್ ಬಂಗೇರ ಶಂಕರಪುರ ಅಧ್ಯಕ್ಷತೆ ವಹಿಸುವರು.
ಶಾಸಕ ಲಾಲಾಜಿ ಆರ್. ಮೆಂಡನ್, ಮಹಾಲಕ್ಷ್ಮೀ ಕ್ರೆಡಿಟ್ ಕೋ ಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಯಶಪಾಲ್ ಎ. ಸುವರ್ಣ ಮತ್ತಿತರರು ಪಾಲ್ಗೊಳ್ಳುವರು. ಮಂಜಣ್ಣ ಸೇವಾ ಬ್ರಿಗೇಡ್ ಮಂಗಳೂರು, ವಾತ್ಸಲ್ಯ ಉಡುಪಿ, ಸತ್ಯದ ತುಳುವೆರ್ ಉಡುಪಿ, ಪತ್ರಕರ್ತ ಮೋಹನದಾಸ ಮರಕಡ, ಸಮಾಜ ಸೇವಕರಾದ ರವಿ ಕಟಪಾಡಿ, ದೈವ ನರ್ತಕ ಗುಡ್ಡ ಪಾಣಾರ, ಸಮಾಜ ಸೇವಾ ಸಂಘಟನೆ ವೀರಕೇಸರಿ ಬೆಳ್ತಂಗಡಿ ಸಂಸ್ಥೆಯನ್ನು ಅಭಿನಂದಿಸಲಾಗುವುದು.
ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗುವುದು. ಎಂದು ಸಂಘಟಕರು ತಿಳಿಸಿದ್ದಾರೆ.
