ಪಡುಬಿದ್ರಿ ಬಂಟರ ಸಂಘ-ಜಾಗತಿಕ ಬಂಟರ ಸಂಘ ವತಿಯಿಂದ ಮನೆ ಹಸ್ತಾಂತರ: vishwanews24
ಪಡುಬಿದ್ರಿ ಬಂಟರ ಸಂಘ-ಜಾಗತಿಕ ಬಂಟರ ಸಂಘ ವತಿಯಿಂದ ಮನೆ ಹಸ್ತಾಂತರ
ಬೆಳಪು ದೇವಿಪ್ರಸಾದ್ ಶೆಟ್ಟಿ ಹಾಗೂ ಐಕಳ ಹರೀಶ್ ಶೆಟ್ಟಿ ಮುಂದಾಳತ್ವದಲ್ಲಿ ನಿರ್ಮಾಣವಾದ ಮನೆ:vishwanews24
ಉಚ್ಚಿಲ: ಪಡುಬಿದ್ರಿ ಬಂಟರ ಸಂಘ ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ನಿರ್ಮಿಸಲಾದ ಮನೆಯ ಹಸ್ತಾಂತರವು 25-11-2022 ರಂದು2-00 ಗಂಟೆಗೆ ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಶೆಟ್ಟಿ ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಯವರ ಉಪಸ್ಥಿತಿಯಲ್ಲಿ ಬೆಳಪು ಗ್ರಾಮದ ವಾಜಪೇಯಿ ಬಡಾವಣೆಯಲ್ಲಿ ಶ್ರೀಮತಿ ಸುಜಾತಾ ಅಶೋಕ್ ಶೆಟ್ಟಿಯವರಿಗೆ ಮನೆಯ ಹಸ್ತಾ0ತರ ನೆರವೇರಿತು.
ಈ ಸಂಧರ್ಭದಲ್ಲಿ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು ಎರ್ಮಾಳು ಶೀಲಾ ಕೆ ಶೆಟ್ಟಿ ಜ್ಯೋತಿ ಶೆಟ್ಟಿ,ಶೋಭ ಜೆ ಶೆಟ್ಟಿ, ವಾಣಿ ಆರ್ ಶೆಟ್ಟಿ ಪಣಿಯೂರ್ ಗುತ್ತು ಕರುಣಾಕರ ಶೆಟ್ಟಿ, ಪಣಿಯೂರು ನಾಡಿಗುತ್ತು ಸುಕುಮಾರ್ ಶೆಟ್ಟಿ ಬೆಳಪುಗುತ್ತು ಲೋಕೇಶ್ ಶೆಟ್ಟಿ, ಕಲ್ಲಾಪು ಗುತ್ತು ಗಣೇಶ್ ಶೆಟ್ಟಿ,ಪಣಿಯೂರು ಗುತ್ತು ಸುಚಿನ್ ಶೆಟ್ಟಿ,ಮೂಡುಮನೆ ಗಣೇಶ್ ಶೆಟ್ಟಿ ಕುಂಜೂರು ಸಾಧು ಶೆಟ್ಟಿಯವರು ಉಪಸ್ಥಿತರಿದ್ದರು.

