ಪಡುಬಿದ್ರಿ : ವಿಳಾಸ ಕೇಳುವ ನೆಪದಲ್ಲಿ ಕರಿಮಣಿ ಸರ ದೋಚಿ ಪರಾರಿ – Vishwanews24
ಪಡುಬಿದ್ರಿ : ವಿಳಾಸ ಕೇಳುವ ನೆಪದಲ್ಲಿ ಕರಿಮಣಿ ಸರ ದೋಚಿ ಪರಾರಿ
ಪಡುಬಿದ್ರಿ: ಇನ್ನಾ ಗ್ರಾಮದ ಹೊಸಕಾಡು ಎಂಬಲ್ಲಿ ಹಾಡಿ ದಾರಿಯಲ್ಲಿ ಸ್ಕೂಟರ್ ನಲ್ಲಿ ಅಂಗನವಾಡಿ ಕಾರ್ಯಕರ್ತೆ ಕರ್ತವ್ಯಕ್ಕೆ ತೆರಳುತ್ತಿದ್ದಾಗ , ಯುವಕರಿಬ್ಬರು ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ ಮಾಡಿದ ಘಟನೆ ನಡೆದಿದೆ.
ಇನ್ನಾ ಗ್ರಾಮದ ಹೊಸಕಾಡು ಎಂಬಲ್ಲಿ ಹಾಡಿ ದಾರಿಯಲ್ಲಿ ಸ್ಕೂಟರ್ ನಲ್ಲಿ ಅಂಗನವಾಡಿ ಕಾರ್ಯಕರ್ತೆ ಕರ್ತವ್ಯಕ್ಕೆ ತೆರಳುತ್ತಿದ್ದಾಗ , ಯುವಕರಿಬ್ಬರು ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ ಮಾಡಿದ ಘಟನೆ ನಡೆದಿದೆ.
ಹೊಸಕಾಡು ನಿವಾಸಿ ರೇಖಾ (40) ಅವರ 32 ಗ್ರಾಂ ಕರಿಮಣಿ ಸರವನ್ನು, ವಿಳಾಸ ಕೇಳುವ ನೆಪದಲ್ಲಿ ,ಅಪರಿಚಿತ ಯುವಕರಿಬ್ಬರು ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಹೆಲ್ಮೆಟ್ ಧರಿಸಿದ್ದ ಮೋಟಾರು ಬೈಕ್ ಸವಾರ ಪೂರ್ವ ಸನ್ನದ್ದನಾಗಿ ಬೈಕ್ ನಲ್ಲಿ ಕುಳಿತಿದ್ದ. ಹಿಂಬದಿ ಸವಾರ ರೇಖಾ ಅವರ ಬಳಿ ನಿಲ್ಲಿಸಿ ಚೀಟಿ ತೋರಿಸಿ ವಿಳಾಸ ಕೇಳುವ ನೆಪದಲ್ಲಿ ನೆಪದಲ್ಲಿ ಬಂದು ಕೃತ್ಯವೆಸಗಿದ್ದಾನೆ.
