ಪಡುಬಿದ್ರಿ: ಸಾಲಬಾಧೆ ತಾಳಲಾರದೇ ನೇಣು ಬಿಗಿದುಕೊಂಡು ವ್ಯಕ್ತಿ ಸಾವು – vishwanews24

Featured, ಉಡುಪಿ

ಪಡುಬಿದ್ರಿ: ಸಾಲಬಾಧೆ ತಾಳಲಾರದೇ ನೇಣು ಬಿಗಿದುಕೊಂಡು ವ್ಯಕ್ತಿ ಸಾವು

ಪಡುಬಿದ್ರಿ: ಮೂರು ತಿಂಗಳ ಹಿಂದೆ ವಿದೇಶದಿಂದ ಬಂದಿದ್ದು ಪಡುಬಿದ್ರಿ ಬೇಂಗ್ರೆ ರಸ್ತೆಯ ಕೌಸರ್‌ ಮಂಜಿಲ್‌ನ ನಸ್ರುಲ್ಲಾ(29) ಎಂಬವರು ಸಾಲಬಾಧೆ ತಾಳಲಾರದೇ ತನ್ನ ರೂಮಿನ ಫ್ಯಾನ್‌ಗೆ ಚೂಡಿದಾರ್‌ ವೇಲ್‌ನಿಂದ ನೇಣು ಬಿಗಿದುಕೊಂಡು ಜ. 8ರ ಸಂಜೆಯ ವೇಳೆ ಸಾವನ್ನಪ್ಪಿದ್ದಾರೆ.

ನಸ್ರುಲ್ಲಾ ಅವರು ಪಡೆದಿದ್ದ ಮನೆ ಸಾಲ, ವೈಯಕ್ತಿಕ ಸಾಲಗಳನ್ನು ಹಿಂತಿರುಗಿಸಲು ಹಣಕಾಸು ಸಂಸ್ಥೆಯ ಮಂದಿ ಹುಡುಕಿಕೊಂಡು ಇವರ ಮನೆಗೆ ಬರುತ್ತಿದ್ದರು. ತಮ್ಮ ಪತ್ನಿಯ ಆಭರಣಗಳನ್ನೂ ಅಡವಿಟ್ಟಿದ್ದ ನಸ್ರುಲ್ಲಾ ಇಂದು ಕೆಲ ಚಿನ್ನಾಭರಣಗಳನ್ನು ಬಿಡಿಸಿಕೊಂಡು ಬಂದಿದ್ದರು. ಸಂಜೆಯ ವೇಳೆ ಪತ್ನಿಯೊಂದಿಗೆ ಜಗಳವಾಡಿ, ತನ್ನ ಮೊಬೈಲನ್ನು ಪುಡಿಗೈದು ನೇರ ತಮ್ಮ ಬೆಡ್‌ರೂಮಿಗೆ ತೆರಳಿ ಬಾಗಿಲು ಭದ್ರಪಡಿಸಿಕೊಂಡು ಆತ್ಮಹತ್ಯೆಯನ್ನು ಅವರ ಗೈದುಕೊಂಡಿರುವುದಾಗಿ ಪೊಲೀಸ್‌ ಮಾಹಿತಿಗಳು ತಿಳಿಸಿವೆ. ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣವು ಭಾರತೀಯ ದಂಡಸಂಹಿತೆಯನ್ವಯ ದಾಖಲಾಗಿದೆ.

ತಿರುಪತಿಯಲ್ಲಿ ಭೀಕರ ಕಾಲ್ತುಳಿತ: ಮೃತರ ಸಂಖ್ಯೆ 6ಕ್ಕೆ ಏರಿಕೆ, 20 ಜನರಿಗೆ ಗಾಯ  – vishwanews24

Leave a Reply