ಪತ್ರಕರ್ತರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿ: ಫಾರೂಕ್ ಚಂದ್ರನಗರ
ಪತ್ರಕರ್ತರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿ: ಫಾರೂಕ್ ಚಂದ್ರನಗರ
ಬೆಂಗಳೂರು: ಸರಕಾರ ಮಾಧ್ಯಮ ಮಿತ್ರರನ್ನು ಕೊರೊನಾ ಫ್ರಂಟ್ಲೈನ್ ವಾರಿಯರ್ ಎಂದು ಘೋಷಣೆ ಮಾಡಿದೆ. ಆದರೆ ಅತ್ಯಂತ ಕಷ್ಟದಿಂದ ಜೀವನ
ಮಾಡುವ ಮಾಧ್ಯಮದವರಿಗೆ ರಾಜ್ಯದಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯಸಂಯೋಜಕ ಫಾರೂಕ್ ಚಂದ್ರನಗರ ಆಗ್ರಹಿಸಿದರು.
ಫಾರೂಕ್ ಚಂದ್ರನಗರ ಕೋವಿಡ್ ಎರಡು ಅಲೆಯ ಸಂದರ್ಭದಲ್ಲಿ ಸಾವಿರಾರು ಕುಟುಂಬಗಳಿಗೆ ಸಮಾಜ ಸೇವಾ ವೇದಿಕೆ ಕಳತ್ತೂರು ಇದರ ವತಿಯಿಂದ ಪಡಿತರ ಕಿಟ್ ಆರೋಗ್ಯ ಕಿಟ್ ಸೇರಿದಂತೆ ವಿವಿಧ ತಾಲೂಕು ಪತ್ರಕರ್ತರಿಗೂ ನೆರವು ನೀಡಿದ್ದರು.
