ಪಾಕಿಸ್ತಾನವನ್ನು ನಾಶ ಮಾಡಲು ನಮ್ಮ ದೇಶ ಭಾರತಕ್ಕೆ ಒಂದೇ ದಿನ ಸಾಕು: ಹುತಾತ್ಮ ಯೋಧನ ತಾಯಿ – Vishwanews24

Featured, ದೇಶ

ಮೀರತ್​: ಜಮ್ಮುಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರಗಾಮಿಗಳು ನಡೆಸಿದ ಭೀಕರ ದಾಳಿಯ ಕಾರಣದಿಂದ ಹಲವಾರು ಭಾರತಿಯ ಸೈನಿಕರು ಹುತಾತ್ಮರಾಗಿದ್ದಾರೆ.

ಉತ್ತರ ಪ್ರದೇಶದ ಮೀರತ್​ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹುತಾತ್ಮ ಯೋಧನ ತಾಯಿ “ಪಾಕಿಸ್ತಾನ ನಮ್ಮ ದೇಶದ ಅನೇಕ ಮಕ್ಕಳನ್ನು ಹತ್ಯೆ ಮಾಡಿದೆ. ಭಾರತಕ್ಕಿಂತ ಪಾಕ್​ ದೊಡ್ಡದೇನಲ್ಲ. ನಮ್ಮನ್ನು ನಾಶ ಮಾಡಲು ಅದರ ಕೈಯಲ್ಲಿ ಸಾಧ್ಯವಾಗುವುದಿಲ್ಲ. ಆದರೆ, ಭಾರತಕ್ಕೆ ಪಾಕ್​ ನಾಶಮಾಡಲು ಒಂದೇ ದಿನ ಸಾಕು, ದೇಶಕ್ಕಾಗಿ ಜೀವನವನ್ನು ತ್ಯಾಗ ಮಾಡಿದ ನನ್ನ ಮಗನ ಮೇಲೆ ನನಗೆ ಹೆಮ್ಮೆ ಇದೆ ಎಂದು ಸ್ಫೂರ್ತಿಯ ಮಾತುಗಳನ್ನಾಡಿದ್ದಾರೆ.

ಇನ್ನು ನನ್ನ ಮಗ ತನ್ನ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾನೆ. ಈ ಕುರಿತಾದಂತೆ ನನಗೆ ಹೆಮ್ಮೆಯಿದೆ ಎಂದು ಅಜಯ್ ಕುಮಾರ್ ತಾಯಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.