ಪೂತ್ತೂರು: ರಿಕ್ಷಾ – ಬಸ್ಸು ಡಿಕ್ಕಿ ಮಹಿಳೆ ಸಾವು
ಪುತ್ತೂರು, ಮಾ. 25: ಬಸ್ ಮತ್ತು ರಿಕ್ಷಾ ನಡುವೆ ಅಪಘಾತ ಸಂಭವಿಸಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಆರ್ಯಾಪು ಗ್ರಾಮದ ಸಂಪ್ಯ ಎಂಬಲ್ಲಿ ರವಿವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ನಡೆದಿದೆ.

ಆರ್ಯಾಪು ಗ್ರಾಮದ ನಿವಾಸಿ ಮೋಹನ್ ಗೌಡ ಎಂಬವರ ಪತ್ನಿ ಲೀಲಾವತಿ (50) ಸ್ಥಳದಲ್ಲೇ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇತರ ಪ್ರಯಾಣಿಕರಾದ ಮೋಹನ್ ಗೌಡ ಅವರ ಸಹೋದರ ಬಾಬು ಗೌಡ, ಸಂಬಂಧಿ ಸುಶೀಲ ಮತ್ತು ಕಮಲಾ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

]

