ಪ್ರತಿ ದಿನ 15 ಗಂಟೆ ಕೆಲಸ ಮಾಡಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ : ಬೊಮ್ಮಾಯಿ – Vishwanews24
ಪ್ರತಿ ದಿನ 15 ಗಂಟೆ ಕೆಲಸ ಮಾಡಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ : ಬೊಮ್ಮಾಯಿ – Vishwanews24
ಹುಬ್ಬಳ್ಳಿ: ನನ್ನ ಬಳಿ 365 ದಿನ ದಣಿವರಿಯದೇ ಕೆಲಸ ಮಾಡುವ ಶಕ್ತಿ ಇದೆ. ನಾನು ಪ್ರತಿ ದಿನ 15 ಗಂಟೆ ಕೆಲಸ ಮಾಡುವ ಸಂಕಲ್ಪ ಮಾಡಿದ್ದು, ಮುಂದಿನ ಚುನಾವಣೆಯಲ್ಲಿ ಸರ್ಕಾರ ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಶಪಥ ಮಾಡಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಪಕ್ಷದ ಹಿರಿಯ ಮುಖಂಡರು ನನ್ನ ಮೇಲೆ ಬಹಳ ವಿಶ್ವಾಸ ಇಟ್ಟಿದ್ದಾರೆ, ಹೀಗಾಗಿ ಈಗಿನಿಂದಲೇ ಮುಂದಿನ ಚುನಾವಣೆ ಕಾರ್ಯ ಆರಂಭ ಮಾಡುತ್ತೇನೆ. ಹುಬ್ಬಳ್ಳಿಯಲ್ಲಿ ಎರಡು ದಿನ ಪಕ್ಷದ ಕಾರ್ಯಕಾರಿಣಿ ಇದೆ, ಮುಂದಿನ ಪಕ್ಷ ಸಂಘಟನೆ ಹಾಗೂ ರಾಜಕೀಯ ಬಗ್ಗೆ ಇಲ್ಲಿ ಚರ್ಚೆ ಆಗಲಿದೆ. ಸದ್ಯ ಕ್ಯಾಬಿನೆಟ್ ವಿಸ್ತರಣೆ ಬಗ್ಗೆ ಏನು ಹೇಳಲ್ಲ, ಏನೆಲ್ಲಾ ಚರ್ಚೆ ಆಗಲಿದೆ ಎಂದು ಅರುಣ್ ಸಿಂಗ್ ನಿರ್ಧಾರ ಮಾಡುತ್ತಾರೆ ಎಂದರು.
Live : ಹುಬ್ಬಳ್ಳಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟನೆ#BJPKarHubballiKaryakarini https://t.co/sYpcdn3zPV
— BJP Karnataka (@BJP4Karnataka) December 28, 2021
ನೈಟ್ ಕರ್ಫ್ಯೂ ಹಿನ್ನೆಲೆ : ಡಿ. 29 ರಿಂದ ಜ. 4ರ ವರೆಗೆ ಎಲ್ಲಾ ಫ್ಲೈಓವರ್ ಬಂದ್ – Vishwanews24
