ಪ್ರವೀಣ್ ನೆಟ್ಟಾರ್ ಹತ್ಯೆ: ಲಾಠಿಚಾರ್ಜ್ ಮಾಡಿದ ಪೊಲೀಸರು-ಹಿಂದು ಸಂಘಟನೆಯ ಕಾರ್ಯಕರ್ತನ ತಲೆಗೆ ಏಟು: ಹಿಂದುಗಳ ಸರ್ಕಾರದಿಂದ ಹಿಂದುಗಳ ಮೇಲೆ ಲಾಠಿಚಾರ್ಜ್ ಎಂದು ಬೇಸರ ಹೊರಹಾಕಿದ ಹಿಂದು ಸಂಘಟನೆಗಳು:vishwanews24
ಪ್ರವೀಣ್ ನೆಟ್ಟಾರ್ ಹತ್ಯೆ: ಲಾಠಿಚಾರ್ಜ್ ಮಾಡಿದ ಪೊಲೀಸರು-ಹಿಂದು ಸಂಘಟನೆಯ ಕಾರ್ಯಕರ್ತನ ತಲೆಗೆ ಏಟು: ಹಿಂದುಗಳ ಸರ್ಕಾರದಿಂದ ಹಿಂದುಗಳ ಮೇಲೆ ಲಾಠಿಚಾರ್ಜ್ ಎಂದು ಬೇಸರ ಹೊರಹಾಕಿದ ಹಿಂದು ಸಂಘಟನೆಗಳು:vishwanews24
ಪುತ್ತೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಅವರ ಹತ್ಯೆ ಖಂಡಿಸಿ ಹಿಂದು ಪರ ಸಂಘಟನೆಗಳ ಆಕ್ರೋಶ ಮುಗಿಲು ಮುಟ್ಟಿದೆ.ಪಾರ್ಥಿವ ಶರೀರ ಬೆಳ್ಳಾರೆ ಮುಟ್ಟಿದ್ದು ಅಂತಿಮ ದರ್ಶನಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಸೇರಿದ್ದಾರೆ ಈ ಸಂಧರ್ಬದಲ್ಲಿ ಆಗಮಿಸಿದ ಬಿಜೆಪಿ ಅದ್ಯಕ್ಷ ನಳೀನಕ್ ಕುಮಾರ್ ಅವರ ಕಾರನ್ನು ಮಗುಚಿಹಾಕಲು ಯತ್ನಿಸಿದ ಘಟನೆ ನಡೆದಿದೆ.
ಇದೇ ಸಂದರ್ಭದಲ್ಲಿ ಅಲ್ಲಿಗೆ ಬಂದಿರುವ ನಾಯಕರು ಕಾರ್ಯಕರ್ತರ ಜತೆಗೆ ಯಾವುದೇ ರೀತಿಯಲ್ಲಿ ಮಾತಾಡದೇ ಇರುವುದರಿಂದ ಆಕ್ರೋಶಗೊಂಡ ಕಾರ್ಯಕರ್ತರು ನಾಯಕರ ವಿರುದ್ದ ಹರಿಹಾಯ್ದ ಪರಿಣಾಮ ಪೊಲೀಸರು ಲಾಠಿಚಾರ್ಜ್ ಮಾಡಿರುವ ಪರಿಣಾಮ ಕಾರ್ಯಕರ್ತರ ತಲೆಗೆ ಗಾಯವಾಗಿದೆ.

