ಪ್ರವೀಣ್ ನೆಟ್ಟಾರ್ ಹತ್ಯೆ:ಬೆಳ್ಳಾರೆಯಲ್ಲಿ ಸೇರಿದ ಸಾವಿರ ಸಾವಿರ ಹಿಂದು ಸಂಘಟನೆಯ ಕಾರ್ಯಕರ್ತರು:ಮಾಧ್ಯಮಗಳ ವರದಿಯ ನಂತರ ಬಿಜೆಪಿ ನಾಯಕರು ಕೂಡ ಭಾಗಿ – Vishwanews24
ಪ್ರವೀಣ್ ನೆಟ್ಟಾರ್ ಊರಿನಿಂದ ಸ್ಥಳ ವರದಿ: ವಿಶ್ವನ್ಯೂಸ್24 -ಕ್ಷಣ ಕ್ಷಣದ ಮಾಹಿತಿ ಓದಿ
ಪ್ರವೀಣ್ ನೆಟ್ಟಾರ್ ಹತ್ಯೆ:ಬೆಳ್ಳಾರೆಯಲ್ಲಿ ಸೇರಿದ ಸಾವಿರ ಸಾವಿರ ಹಿಂದು ಸಂಘಟನೆಯ ಕಾರ್ಯಕರ್ತರು:ಮಾಧ್ಯಮಗಳ ವರದಿಯ ನಂತರ ಬಿಜೆಪಿ ನಾಯಕರು ಕೂಡ ಭಾಗಿ
ಪುತ್ತೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಅವರ ಹತ್ಯೆ ಖಂಡಿಸಿ ಹಿಂದು ಪರ ಸಂಘಟನೆಗಳ ಆಕ್ರೋಶ ಮುಗಿಲು ಮುಟ್ಟಿದೆ.ಪಾರ್ಥಿವ ಶರೀರ ಬೆಳ್ಳಾರೆ ಮುಟ್ಟಿದ್ದು ಅಂತಿಮ ದರ್ಶನಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಸೇರಿ ” ಅಮರ್ ರಹೇ” ಎಂಬ ಘೋಷಣೆ ಕೂಗುತ್ತಿದ್ದಾರೆ.ಈ ನಡುವೆ ಬೆಳಗ್ಗಿನಿಂದ ಬಿಜೆಪಿ ನಾಯಕರ ವಿರುದ್ದ ಮಾಧ್ಯಮಗಳು ಸುದ್ದಿ ಪ್ರಕಟವಾಗುತ್ತಿರುವ ಬೆನ್ನಲ್ಲೆ ಹೈಡ್ರಾಮ ಬಿಜೆಪಿ ನಾಯಕರು ಆಮೆ ನಡಿಗೆಯೊಂದಿಗೆ ಆಗಮಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

