ಪ್ರವೀಣ್ ಹತ್ಯೆ ಪ್ರಕರಣ ಸಂಬಂಧ ಎನ್ಐಎ ತನಿಖೆ ಚುರುಕು ಪಡೆಯಬೇಕು : ಕೇಂದ್ರ ಗೃಹ ಸಚಿವರಲ್ಲಿ ಸಚಿವೆ ಕರಂದ್ಲಾಜೆ ಆಗ್ರಹ – Vishwanews24
ಉಡುಪಿ:ಕೇಂದ್ರ ಗೃಹ ಸಚಿವರನ್ನು ಭೇಟಿಯಾದ ಸಚಿವೆ ಕರಂದ್ಲಾಜೆ
ಪ್ರವೀಣ್ ಹತ್ಯೆ ಪ್ರಕರಣ ಸಂಬಂಧ ಎನ್ಐಎ ತನಿಖೆ ಚುರುಕು ಪಡೆಯಬೇಕು
ಹಂತಕರನ್ನು ಶೀಘ್ರ ಬಂಧಿಸಬೇಕು
ಬೆಂಗಳೂರಿನಲ್ಲೂ ಎನ್ಐಎ ಕಚೇರಿ ಪ್ರಾರಂಭಿಸಬೇಕು
ಕೇಂದ್ರ ಗೃಹ ಸಚಿವರಲ್ಲಿ ಸಚಿವೆ ಕರಂದ್ಲಾಜೆ ಆಗ್ರಹ
ಉಡುಪಿ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹ ಸಚಿವರನ್ನು ಇಂದು ನವದೆಹಲಿಯಲ್ಲಿ ಭೇಟಿ ಮಾಡಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಎನ್ಐಎ ತನಿಖೆ ಚುರುಕುಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರವೀಣ್ ಹತ್ಯೆ ಪ್ರಕರಣದ ತನಿಖೆ ಚುರುಕು ಪಡೆಯಬೇಕು. ಹಂತಕರನ್ನು ಶೀಘ್ರ ಬಂಧಿಸಬೇಕು. ಬೆಂಗಳೂರಿನಲ್ಲೂ ಎನ್ಐಎ ಕಚೇರಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕದಲ್ಲಿ ಕೇರಳ ಮಾದರಿಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಆಗುತ್ತಿದೆ. ಕುತ್ತಿಗೆ, ತಲೆ ಕಡಿಯುತ್ತಿದ್ದಾರೆ. ರುದ್ರೇಶ್ ಕೊಲೆ ಪ್ರಕರಣ ಸೇರಿದಂತೆ ಮಂಗಳೂರು ಮತ್ತು ಶಿವಮೊಗ್ಗದಲ್ಲಿ ನಡೆದ ಕೊಲೆ ಪ್ರಕರಣಗಳಲ್ಲಿ ಇದೇ ಮಾದರಿ ಅನುಸರಿಸಲಾಗಿದೆ ಎಂದು ಶೋಭಾ ಕರಂದ್ಲಾಜೆ ಅವರು ಗೃಹ ಸಚಿವರಿಗೆ ಮನವರಿಕೆ ಮಾಡಿದರು.
ಹಂತಕರಿಗೆ ತರಬೇತಿ ಎಲ್ಲಿ ಸಿಗುತ್ತಿದೆ ಎಂಬುವುದು ಕೂಡಾ ತನಿಖೆ ಆಗಬೇಕು. ಇದಕ್ಕೆ ಹಣಕಾಸು ನೆರವು ನೀಡುವವರನ್ನು ಪತ್ತೆ ಮಾಡಿ ಇದನ್ನೂ ತನಿಖೆ ಮಾಡಬೇಕು ಎಂದು ಈ ವೇಳೆ ಒತ್ತಾಯಿಸಿದರು.
ಮಂಗಳೂರು : ಕೊಟ್ಟಾರ ಚೌಕಿಯಲ್ಲಿ ಯುವ ಜನತಾದಳದ ನೂತನ ಕಚೇರಿ ಉದ್ಘಾಟನೆ – Vishwanews24
