ಬಂಟಕಲ್ ಇಂಜಿನಿಯರಿ0ಗ್ ಕಾಲೇಜಿನ ವಿದ್ಯಾರ್ಥಿಗಳಿಂದ ನೆಲಕಡಲೆ ಬೀಜ ಬಿತ್ತನೆಯ ಯಂತ್ರದ ಅಭಿವೃದ್ಧಿ – Vishwanews24

Featured, ಉಡುಪಿ

ಬಂಟಕಲ್ ಇಂಜಿನಿಯರಿ0ಗ್ ಕಾಲೇಜಿನ ವಿದ್ಯಾರ್ಥಿಗಳಿಂದ ನೆಲಕಡಲೆ ಬೀಜ ಬಿತ್ತನೆಯ ಯಂತ್ರದ ಅಭಿವೃದ್ಧಿ

ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿ0ಗ್ ವಿಭಾಗದ ವಿದ್ಯಾರ್ಥಿಗಳಾದ ಮರೆನ್ ಮಾರ್ಟಿನ್ ಪಿಂಟೋ, ಕ್ಲೆಮೆಂಟ್ ಜಾನ್ಸನ್ ಡಿಸೋಜಾ ಹಾಗೂ ರಮೇಶ್ ಇವರು ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕರಾದ ಶ್ರೀ ಲಿಂಗರಾಜ ರಿತ್ತಿಯವರ ಮಾರ್ಗದರ್ಶನದಲ್ಲಿ
ಕಡಲೇ ಬೀಜ ಬಿತ್ತನೆಯ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ.

ಕೃಷಿಯು ಭಾರತದ ಆರ್ಥಿಕತೆಯ ಬೆನ್ನೆಲುಬಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕೂಲಿ ಕಾರ್ಮಿಕರ ಕೊರತೆಯಿಂದಾಗಿ ಕೃಷಿ ಕಾರ್ಯಗಳು ಸ್ಥಗಿತಗೊಂಡಿದೆ. ಕೂಲಿ ಕಾರ್ಮಿಕರ ಕೊರತೆಯಿಂದ ಶೇಂಗಾ ಬೆಳೆಯುವುದು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಲಭ್ಯವಿರುವ ಬಿತ್ತನೆ ಯಂತ್ರಗಳು ದುಬಾರಿ ಮತ್ತು ಬೃಹತ್ ಗಾತ್ರದಾಗಿದೆ. ಈ ಎಲ್ಲಾ ತೊಂದರೆಗಳನ್ನು ನಿವಾರಿಸಲು ವಿದ್ಯಾರ್ಥಿಗಳು ಸೂಕ್ತ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಯಂತ್ರವು ಬೀಜ ಬಿತ್ತನೆಯ ಚಟುವಟಿಕೆಯಲ್ಲಿ ರೈತನ ಶ್ರಮ ಮತ್ತು ಸಮಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಕೃಷಿ ಕಾರ್ಯದಲ್ಲಿ ರೈತನ
ಅವಲಂಬನೆಯನ್ನು ಕಡಿಮೆ ಮಾಡುತ್ತದೆ.

ಕಾಪು ಹೆದ್ದಾರಿಯ ಹೊಂಡ ತಪ್ಪಿಸಲು ಹೋಗಿ ಡೈವರ್ಷನ್ ಏರಿ ಕಂಬಕ್ಕೆ ಡಿಕ್ಕಿ ಹೊಡೆದ ಕಾರು:ಪ್ರಾಣಪಾಯದಿಂದ ಪಾರಾದ ಚಾಲಕಿ vishwanews24

ಈ ಯಂತ್ರವನ್ನು ಉಳುಮೆ ಮಾಡಲು, ಬೀಜ ಬಿತ್ತಲು, ನೀರು ಸಿಂಪಡಿಸಲು ಮತ್ತು ಮಣ್ಣನ್ನು ಮುಚ್ಚಲು ಬಳಸಲಾಗುತ್ತದೆ. ಈ ಎಲ್ಲಾ ಕಾರ್ಯವನ್ನು ಒಂದೇ ಯಂತ್ರಮಾಡುವುದರಿ0ದ ಕೃಷಿ ಕಾರ್ಯದಲ್ಲಿನ ಖರ್ಚು ಕಡಿಮೆಯಾಗುತ್ತದೆ. ಈ ಯಂತ್ರದಲ್ಲಿ ಸೌರ ಶಕ್ತಿಯನ್ನು ಬಳಸಿಕೊಂಡು
ಬ್ಯಾಟರಿಯನ್ನು ಚಾರ್ಜ್ ಮಾಡಲಾಗುದರಿಂದ ಇದು ಪರಿಸರ ಸ್ನೇಹಿಯಾಗಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಮತ್ತು ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ. ಗಜಾನನ ಅಣ್ಣೆ ತಂಡವನ್ನು ಅಭಿನಂದಿಸಿದ್ದಾರೆ.

Leave a Reply