ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ರಾಜ್ಯಮಟ್ಟದ ಕ್ರಿಕೆಟ್ ಸ್ಪರ್ಧೆಗೆ ಆಯ್ಕೆ -Vishwanews24
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ರಾಜ್ಯಮಟ್ಟದ ಕ್ರಿಕೆಟ್ ಸ್ಪರ್ಧೆಗೆ ಆಯ್ಕೆ -Vishwanews24
ಶ್ರೀ ಮಧ್ವ ವಾದಿರಾಜ ತಾಂತ್ರಿಕ ವಿದ್ಯಾಲಯ, ಬಂಟಕಲ್, ಉಡುಪಿ ಇಲ್ಲಿನ ಮೂರನೇ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾದ ಶ್ರೀ ದೀಪಕ್ ದೇವಾಡಿಗ ಇವರು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಆಯೋಜಿಸಿದ “ಮೊಫುಸಿಲ್ಲ್ ಪಂದ್ಯಾವಳಿ 2020- 21” ಮಂಗಳೂರು ವಲಯದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.
SCDCC ಬ್ಯಾಂಕ್ ಮಂಗಳೂರು- ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಅಂಗಾರ ಎಸ್ ಗೆ ಅಭಿನಂದನಾ ಸಮಾರಂಭ.-vishwanews24
ಈ ಪಂದ್ಯಾವಳಿಯನ್ನು 4 ರಿಂದ 9 ಜನವರಿ 2021ರವರೆಗೆ ಬೆಂಗಳೂರಿನಲ್ಲಿ ನಡೆಸಲಾಗಿತ್ತು ಹಾಗೂ ಇವರು ೨೩ ವರ್ಷದ ಕೆಳಗಿನವರಿಗೆ ೧೬ರಿಂದ ೩೦ ಜನವರಿ ೨೦೨೧ರವರೆಗೆ ಆಯೋಜಿಲಾಗಿದ್ದ “ಎಸ್ ಎ ಶ್ರೀನಿವಾಸನ್ ಮೆಮೋರಿಯಲ್ ರಾಜ್ಯ ಮಟ್ಟದ ಪಂದ್ಯಾವಳಿ 2020-21 ಯಲ್ಲಿ
ಭಾಗವಹಿಸಿರುತ್ತಾರೆ.
ವಿದ್ಯಾರ್ಥಿಯ ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ದೈಹಿಕ ಶಿಕ್ಷಕರು ಹರ್ಷ ವ್ಯಕ್ತಪಡಿಸಿರುತ್ತಾರೆ.
ಭಗವಾನ್ ಮುಖಕ್ಕೆ ಮಸಿ ಬಳಿದ ಪ್ರಕರಣ : ವಿಚಾರಣೆಗೆ ಹಾಜರಾಗಲು ಮೀರಾಗೆ ಪೊಲೀಸ್ ನೋಟಿಸ್ -Vishwanews24

