ಬಜೆಟ್: ಭ್ರಷ್ಟಾಚಾರ ಮುಕ್ತ ಸರ್ಕಾರವಾಗಿದ್ದು, ರಾಷ್ಟ್ರೀಯ ಭದ್ರತೆಯೇ ನಮ್ಮ ಮೊದಲ ಆದ್ಯತೆ :ನಿರ್ಮಲಾ ಸೀತಾರಾಮನ್ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ: ಆರ್ಥಿಕತೆಯ ಕಠಿಣ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ 2ರ ಮೊದಲ ಬಜೆಟ್ ಮಂಡನೆಯಾಗುತ್ತಿದೆ.  ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಮಂಡಿಸುತ್ತಿದ್ದಾರೆ.

ಬಜೆಟ್ ಪ್ರಮುಖ ಅಂಶಗಳು

ರಾಷ್ಟ್ರೀಯ ಭದ್ರತೆ: ಭ್ರಷ್ಟಾಚಾರ ಮುಕ್ತ ಸರ್ಕಾರವಾಗಿದ್ದು, ಆರೋಗ್ಯ, ಸಂಪತ್ತು. ಸಂತೋಷ, ಭದ್ರತೆ ದೇಶದ ಅಭಿವೃದ್ಧಿಗೆ ಮುಖ್ಯ. ರಾಷ್ಟ್ರೀಯ ಭದ್ರತೆಯೇ ನಮ್ಮ  ಮೊದಲ ಆದ್ಯತೆಯಾಗಿದೆ.

ಪಾರಂಪರಿಕಾ ತಾಣಗಳ ಅಭಿವೃದ್ಧಿ: 5 ಪಾರಂಪರಿಕಾ ತಾಣಗಳ ಅಭಿವೃದ್ಧಿಗೆ ಒತ್ತು. ಸಂಸ್ಕೃತಿ ಇಲಾಖೆಗೆ 3,150 ಕೋಟಿ ಮೀಸಲು. ವಿಶ್ಚ ಪ್ರವಾಸೋದ್ಯಮದಲ್ಲಿ 2014ರಲ್ಲಿ 65ನೇ ಸ್ಥಾನದಲ್ಲಿದ್ದ ನಾವು 2019ರಲ್ಲಿ 34ನೇ ಸ್ಥಾನಕ್ಕೆ ಏರಿದ್ದೇವೆ.

ಹೆಚ್ಚಿನ ಪ್ರಮಾಣದಲ್ಲಿ ವಿಷಕಾರಿ ಅನಿಲ ಹೊರಹಾಕುವ ಕಾರ್ಖಾನೆಗಳನ್ನು ಮುಚ್ಚಲು ಕ್ರಮ
ಅಹಮದಾಬಾದ್ ನಲ್ಲಿ ಸಿಂಧೂ ನಾಗರಿಕತೆಯ ಮಹತ್ವವನ್ನು ಸಾರುವ ಮ್ಯೂಸಿಯಂ ಸ್ಥಾಪನೆ
ಸದನದಲ್ಲಿ ತಿರುವಳ್ಳರ್ ತ್ರಿಪದಿ ಮೂಲಕ ರಾಷ್ಟ್ರೀಯ ಭದ್ರತೆಯ ಮಹತ್ವವನ್ನು ಪ್ರತಿಪಾದಿಸಿದ ಅರ್ಥ ಸಚಿವೆ.
ಸ್ವಚ್ಛ ಗಾಳಿ ಪೂರಕ ಯೋಜನೆಗಳಿಗಾಗಿ 4,400 ಕೋಟಿ ರೂಪಾಯಿಗಳ ಅನುದಾನ
ಹಿರಿಯ ನಾಗರಿಕರ ಯೋಜನೆಗಳಿಗಾಗಿ 9,500 ಕೋಟಿ ರೂಪಾಯಿಗಳ ನೆರವು
ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ 53,700 ಕೋಟಿ ರೂಪಾಯಿಗಳ ಅನುದಾನ
ಪರಿಶಿಷ್ಟ ಜಾತಿ ಮತ್ತು ಒಬಿಸಿ ವರ್ಗಗಳ ಸರ್ವತೋಮುಖ ಅಭಿವೃದ್ಧಿಗಾಗಿ 85 ಸಾವಿರ ಕೋಟಿ ರೂಪಾಯಿಗಳ ಅನುದಾನ ಘೋಷಣೆ
ಪ್ರವಾಸೋದ್ಯಮ ಕ್ಷೇತ್ರದ ಉತ್ತೇಜನಕ್ಕಾಗಿ 2,500 ಕೋಟಿ ರೂಪಾಯಿ ಘೋಷಣೆ
ಜಾರ್ಖಂಡ್ ನಲ್ಲಿ ಬುಡಕಟ್ಟು ಮ್ಯೂಸಿಯಂ ಸ್ಥಾಪನೆ
ಸಂಸ್ಕೃತಿ ಸಚಿವಾಲಯಕ್ಕೆ 3150 ಕೋಟಿ ರೂಪಾಯಿಗಳ ಅನುದಾನ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 28,600 ಕೋಟಿ ರೂಪಾಯಿಗಳ ಅನುದಾನ
ಪೌಷ್ಠಿಕಾಂಶ ಪೂರಕ ಯೋಜನೆಗಳಿಗಾಗಿ 35,600 ಕೋಟಿ ರೂಪಾಯಿಗಳ ಅನುದಾನ
ಗರ್ಭಿಣಿಯರ ಮರಣ ಪ್ರಮಾಣ ತಡೆಗೆ ಹೊಸ ಟಾಸ್ಕ್ ಫೋರ್ಸ್ ಸ್ಥಾಪನೆ
ಮುಂದಿನ 05 ವರ್ಷಗಳಲ್ಲಿ ಕ್ವಾಂಟಮ್ ಟೆಕ್ನಾಲಜಿಗಾಗಿ 8 ಸಾವಿರ ಕೋಟಿ ರೂಪಾಯಿಗಳ ಅನುದಾನ ಘೋಷಣೆ
ಖಾಸಗಿ ವಲಯದವರಿಗೆ ಡಾಟಾ ಸೆಂಟರ್ ಪಾರ್ಕ್ ನಿರ್ಮಿಸಲು ಆಹ್ವಾನ
ಎರಡು ರಾಷ್ಟ್ರೀಯ ವಿಜ್ಞಾನ ಯೋಜನೆಗಳಿಗೆ ಅನುದಾನ
ಅಂಗನವಾಡಿ ಕೇಂದ್ರಗಳಲ್ಲೂ ಇನ್ನು ಮಂದೆ ಇಂಟರ್ನೆಟ್ ಸೌಲಭ್ಯ
ಒಂದು ಲಕ್ಷ ಗ್ರಾಮಗಳಿಗೆ ಫೈಬರ್ ನೆಟ್ ಸೌಲಭ್ಯ ವಿಸ್ತರಣೆ