ಬಿಜೆಪಿ ತೊಗಲಿದರೆ ಸಾಕೆನ್ನುವ ಮಟ್ಟಿಗೆ ಜನರು ಇದ್ದಾರೆ : ಸಿದ್ದರಾಮಯ್ಯ – VIshwanews24
ರಾಜ್ಯ ಬಿಜೆಪಿ ಸರ್ಕಾರದಲ್ಲಿ ದುರಾಡಳಿತ, ಭ್ರಷ್ಟಾಚಾರ ಹೆಚ್ಚಾಗಿದೆ ..
ಬಿಜೆಪಿ ತೊಗಲಿದರೆ ಸಾಕೆನ್ನುವ ಮಟ್ಟಿಗೆ ಜನರು ಇದ್ದಾರೆ : ಸಿದ್ದರಾಮಯ್ಯ – VIshwanews24
ಬಾಗಲಕೋಟೆ : ರಾಜ್ಯ ಬಿಜೆಪಿ ಸರ್ಕಾರದಲ್ಲಿ ದುರಾಡಳಿತ, ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರದಲ್ಲಿ ದುರಾಡಳಿ, ಭ್ರಷ್ಟಾಚಾರ ಹೆಚ್ಚಾಗಿದೆ ಅಭಿವೃದ್ದಿ ಕೆಲಸಗಳು ನಿಂತಿವೆ.
ಬಿಜೆಪಿ ತೊಗಲಿದರೆ ಸಾಕೆನ್ನುವ ಮಟ್ಟಿಗೆ ಜನರು ಇದ್ದಾರೆ. ಹೀಗಾಗಿ ಬಿಜೆಪಿಯವರು ಹೆದರಿ ತಾಲೂಕು ಪಂಚಾಯಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಮುಂದೂಡಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾನು ಎಲ್ಲಿ ಚುನಾವಣೆಗೆ ನಿಲ್ಲಬೇಕು ಎಂದು ಸಚಿವ ಕೆ.ಎಸ್. ಈಶ್ವರಪ್ಪರನ್ನು ಕೇಳಬೇಕಾ?ನಮಗೆ ಹೇಳೋದಕ್ಕೆ ಈಶ್ವರಪ್ಪ ಯಾರು? ಜನರು ನನ್ನನ್ನು ಪ್ರೀತಿಯಿಂದ ಕರೆದಲ್ಲಿ ಹೋಗುತ್ತೇನೆ. ಕಾಂಗ್ರೆಸ್ ಹೈಕಮಾಂಡ್ ಎಲ್ಲಿ ಹೇಳುತ್ತೋ ಅಲ್ಲಿ ಚುನಾವಣೆಗೆ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.
