ಬಿಜೆಪಿ ನಡೆಸಿರುವ ಅಪವಿತ್ರ ಮೈತ್ರಿ ಇತಿಹಾಸವನ್ನು ದೇಶ ಮರೆತಿಲ್ಲ : ಬಿ.ಕೆ.ಹರಿಪ್ರಸಾದ್ – vishwanews24

Featured, ರಾಜ್ಯ ನ್ಯೂಸ್

ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್

ಬೆಂಗಳೂರು: ‘ಬಿಜೆಪಿ ನಡೆಸಿರುವ ಅಪವಿತ್ರ ಮೈತ್ರಿಗಳ ಇತಿಹಾಸವನ್ನು ದೇಶ ಮರೆತಿಲ್ಲ. ತಮಿಳುನಾಡಿನಲ್ಲಿ ಜಾತ್ಯತೀತ ಶಕ್ತಿಗಳ ಒಕ್ಕೂಟವನ್ನು ಪ್ರಶ್ನಿಸುವ ಬಿಜೆಪಿ, ಮೊದಲು ತನ್ನ ರಾಜಕೀಯ ಕನ್ನಡಿಯಲ್ಲಿ ತನ್ನದೇ ಮುಖವನ್ನು ನೋಡಿಕೊಂಡರೆ ಸಾಕು ಮುಖವಾಡಗಳೇ ಕಾಣುತ್ತವೆ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಟೀಕಿಸಿದ್ದಾರೆ.

ಶುಕ್ರವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ತಮಿಳುನಾಡಿನ ಕಾಂಗ್ರೆಸ್ ಪಕ್ಷದ ಮೈತ್ರಿ ರಾಜಕಾರಣದ ಬಗ್ಗೆ ಬಿಜೆಪಿ ನಾಯಕ ಬಿ.ಎಲ್.ಸಂತೋಷ್ ನೀಡುತ್ತಿರುವ ಉಪದೇಶಗಳು ಹಾಸ್ಯಾಸ್ಪದ ಮಾತ್ರವಲ್ಲ, ಆತ್ಮದ್ರೋಹಿತನದ ಪರಮಾವಧಿ. ದೇಶದ ಜಾತ್ಯತೀತ, ಪ್ರಜಾಪ್ರಭುತ್ವ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ :

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ – vishwanews24

‘ಕಾಶ್ಮೀರದಲ್ಲಿ ಪ್ರತ್ಯೇಕತಾವಾದದ ರಾಜಕೀಯ ನೆರಳಿನ ನಡುವೆ ಅಧಿಕಾರ ಹಂಚಿಕೊಂಡಿದ್ದು ಯಾರು?. ಪಂಜಾಬಿನಲ್ಲಿ ಪ್ರತ್ಯೇಕತಾವಾದದ ರಾಜಕೀಯ ಆರೋಪಗಳಿಂದ ಸುತ್ತುವರಿದ ಅಕಾಲಿದಳದೊಂದಿಗೆ ದಶಕಗಳ ಕಾಲ ಅಧಿಕಾರ ಸವಿದದ್ದು ಯಾರು?. ತ್ರಿಪುರಾದಲ್ಲಿ ‘ಟಿಪ್ರಾಲ್ಯಾಂಡ್’ ಬೇಡಿಕೆಯನ್ನು ಎತ್ತಿ ಹಿಡಿಯುವ ಐಪಿಎಫ್‍ಟಿ ಪಕ್ಷದ ಜೊತೆ ಸರ್ಕಾರ ನಡೆಸುತ್ತಿರುವುದು ಯಾವ ರಾಷ್ಟ್ರಭಕ್ತಿಯ ರಾಜಕೀಯ?’ ಎಂದು ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

‘ಬಿಹಾರದಲ್ಲಿ ‘ಜಂಗಲ್ ರಾಜ’ ಎಂದು ಹೀಯಾಳಿಸುತ್ತಿದ್ದವರ ಮನೆ ಬಾಗಿಲಿಗೆ ಹೋಗಿ ಅಪ್ಪಿಕೊಂಡು ಸರಕಾರ ನಡೆಸುತ್ತಿರುವುದು ಯಾವ ಮಾಸ್ಟರ್ ಸ್ಟ್ರೋಕ್?. ಮಹಾರಾಷ್ಟ್ರದಲ್ಲಿ ಭ್ರಷ್ಟಾ ಚಾರದ ಪ್ರತೀಕವಾಗಿದ್ದವರನ್ನೇ ಉಪಮುಖ್ಯಮಂತ್ರಿ ಮಾಡಿದ್ದು ಯಾವ ಚುನಾವಣಾ ತಂತ್ರಗಾರಿಕೆ?. ಭ್ರಷ್ಟರನ್ನು ಪ್ರಮಾಣಿಕರನ್ನಾಗಿ ಮಾಡುವ, ದೇಶದ್ರೋಹಿಗಳನ್ನು ದೇಶಪ್ರೇಮಿಗಳನ್ನಾಗಿ ನೋಡುವ, ಪ್ರತ್ಯೇಕತಾವಾದಿಗಳನ್ನು ರಾಷ್ಟ್ರಭಕ್ತರ ಕೂಟವನ್ನಾಗಿ ಮಾಡುವುದು ಬಿಜೆಪಿಯ ಹೀನ ರಾಜಕೀಯ ನೀತಿಯಲ್ಲವೇ?’ ಎಂದು ಹರಿಪ್ರಸಾದ್ ಖಾರವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ :

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ – vishwanews24

 

 

Leave a Reply