ಬಿಜೆಪಿ ಪರ ಸ್ಪರ್ಧಿಸಲು ರಾಜಕೀಯಕ್ಕೆ ಎಂಟ್ರಿ ನೀಡಲಿದ್ದಾರ ಧೋನಿ ಹಾಗೂ ಗಂಭೀರ್ !!?
ಹೊಸದಿಲ್ಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕ್ರಿಕೆಟ್ ದಿಗ್ಗಜರಾದ ಮಹೇಂದ್ರ ಸಿಂಗ್ ಧೋನಿ ಮತ್ತು ಗೌತಮ್ ಗಂಭೀರ್ ಸ್ಪರ್ಧಿಸುತ್ತಾರೆಯೇ ಎಂಬ ಚರ್ಚೆಗಳು ಆರಂಭವಾಗಿವೆ.
ಧೋನಿ ಹಾಗೂ ಗಂಭೀರ್ ಅವರಿಗೆ ಟಿಕೆಟ್ ನೀಡಲು ಬಿಜೆಪಿ ಭಾರಿ ಉತ್ಸಾಹ ತೋರುತ್ತಿದ್ದು, ಇಬ್ಬರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಒಂದು ವೇಳೆ ಇಬ್ಬರು ಬಿಜೆಪಿ ಸೇರ್ಪಡೆಗೊಂಡರೆ ಜಾರ್ಖಾಂಡ್ನಿಂದ ಎಂಎಸ್ ಧೋನಿ ಮತ್ತು ದಿಲ್ಲಿಯಿಂದ ಗಂಭೀರ್ ಅಭ್ಯರ್ಥಿಗಳಾಗುವುದು ನಿಶ್ಚಿತ ಎನ್ನಲಾಗಿದೆ.
ರಾಷ್ಟ್ರೀಯಾ ಪಕ್ಷವಾದ ಬಿಜೆಪಿ, ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿರುವ ಮಹೇಂದ್ರ ಸಿಂಗ್ ಧೋನಿ ಅವರಿಗೆ ತವರು ರಾಜ್ಯ ಜಾರ್ಖಂಡ್ನಿಂದ ಕಣಕ್ಕಿಳಿಸುವುದಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ. ಮಾಹಿಗೆ ಟಿಕೆಟ್ ನೀಡುವ ಮೂಲಕ ಸೆಲಬ್ರಿಟಿಯನ್ನು ಕಣಕ್ಕಿಳಿಸಿ ಯುವ ಮತದಾರರನ್ನ ಸೆಳೆಯುವ ಯೋಜನೆ ರೂಪಿಸಿದೆ ಎನ್ನಲಾಗುತ್ತಿದೆ. ಗೌತಮ್ ಗಂಭೀರ್ ಬಿಜೆಪಿ ಸೇರಿದ್ದು, ದೆಹಲಿ ಅಭ್ಯಾರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

