ಬಿರುವೆರ್ ಕಾಪು -ಫೆಬ್ರವರಿ 21ರಂದು “ಜ್ಞಾನದೀವಿಗೆ” ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ -Vishwanews24

Featured, ಉಡುಪಿ

ಬಿರುವೆರ್ ಕಾಪು -ಫೆಬ್ರವರಿ 21ರಂದು “ಜ್ಞಾನದೀವಿಗೆ” ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ -Vishwanews24

ಕಾಪು: ಬಿರುವೆರ್ ಕಾಪು ಸೇವಾ ಟ್ರಸ್ಟ್ ಇವರ ಆಶ್ರಯದಲ್ಲಿ ಕಾಪು ತಾಲೂಕಿನ ಪ್ರತಿಭಾವಂತ ಬಿಲ್ಲವ ಹಾಗೂ ಇತರ ಸಮಾಜದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ 2020-21ನೇ ಸಾಲಿನ “ಜ್ಞಾನದೀವಿಗೆ”ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ಫೆಬ್ರವರಿ 21 ರಂದು ಕಾಪು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆಯಲಿದೆ.

ಉಡುಪಿ : ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ -Vishwanews24

ಮಾಜಿ ಸಚಿವ ವಿನಯ್‌ಕುಮಾರ್ ಸೊರಕೆ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನುಕಾಪು ಬಿಲ್ಲವರ ಸಹಾಯಕ ಸಂಘದ ಅಧ್ಯಕ್ಷ ವಿಕ್ರಮ್ ಕಾಪು ವಹಿಸಿಕೊಳ್ಳಲಿದ್ದಾರೆ.

ಬಿ.ಪಿ.ಎಲ್. ಕಾರ್ಡಿಗೆ ಅರ್ಜಿ ಸಲ್ಲಿಸಲು ಅವಕಾಶ : ಜಿಲ್ಲಾಧಿಕಾರಿ ಜಿ. ಜಗದೀಶ್ -Vishwanews24

ವಿಶೇಷ ಅತಿಥಿಗಳಾಗಿ ಗೀತಾಂಜಲಿ ಸುವರ್ಣ ಜಿಲ್ಲಾ ಪಂಚಾಯತ್ ಸದಸ್ಯರು, ಉಡುಪಿ ಜಿಲ್ಲೆ,ಅನಿಲ್ ಕುಮಾರ್ ಅಧ್ಯಕ್ಷರು, ಕಾಪು ಪುರಸಭೆ ,ರಮೇಶ್ ಜಿ. ಅಮೀನ್ ಶ್ರೀ ಗುರುಚಾರಿಟೇಬಲ್ ಟ್ರಸ್ಟ್ ರಿ, ಮಂಗಳೂರು ,ಪ್ರಭಾಕರ ಪೂಜಾರಿ ಗೌರವ ಅಧ್ಯಕ್ಷರು, ಕಾಪು ಬಿಲ್ಲವರ ಸಹಾಯಕ ಸಂಘ ರಿ.,ಹಾಗೂ ದೀಪಕ್ ಕುಮಾರ್ ಎರ್ಮಾಳ್ ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.

ಶ್ರೀ ಏಕನಾಥೇಶ್ವರಿ ದೇವಸ್ಥಾನ, ಬಾರ್ಕೂರು “ತೃತೀಯ ವಾರ್ಷಿಕ ವರ್ಧಂತ್ಯುತ್ಸವ ಮತ್ತು ಹಸಿರು ಹೊರೆಕಾಣಿಕೆ ಮೆರವಣಿಗೆ -Vishwanews24

ವರದಿ : ವಿಶ್ವನ್ಯೂಸ್24 ,ಕಾಪು

ಉಡುಪಿ : ಫೆ.20 ರಂದು ಫಲಿಮಾರು, ನಂದಿಕೂರು ನಲ್ಲಿ ಗ್ರಾಮ ಭೇಟಿ ಕಾರ್ಯಕ್ರಮ : ಜಿಲ್ಲಾಧಿಕಾರಿ ಜಿ.ಜಗದೀಶ್ -Vishwanews24