ಬೆಂಗಳೂರು : ಕೆ. ಆರ್. ಮಾರುಕಟ್ಟೆ ಸೆ.1ರಿಂದ ಓಪನ್ -Vishwanwws24

Featured, ರಾಷ್ಟ್ರ ನ್ಯೂಸ್

ಬೆಂಗಳೂರು : ಸಿಲಿಕಾನ್ ಸಿಟಿಯ ಕೆ. ಆರ್. ಮಾರುಕಟ್ಟೆ ಸೆ.1ರಿಂದ ಓಪನ್ -Vishwanwws24

ಬೆಂಗಳೂರು : ಕೊರೋನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ಮುಚ್ಚಲ್ಪಟ್ಟಿದ್ದಂತ ನಗರದ ಪ್ರಮುಖ ಮಾರುಕಟ್ಟೆಯಲ್ಲಿ ಒಂದಾದಂತ ಕೆ ಆರ್ ಮಾರುಕಟ್ಟೆ, ಸೆ.1ರಿಂದ ಮತ್ತೆ ಓಪನ್ ಆಗಲಿದೆ. ಈ ಮೂಲಕ ರೈತರು ಬೆಳದಂತ ಬೆಳೆಗಳನ್ನು ಮಾರಾಟ ಮಾಡಲು ಅನುಕೂಲವಾಗಲಿದೆ.

ಕಳೆದ ಆರು ತಿಂಗಳಿನಿಂದ ಕೊರೋನಾ ಸೋಂಕಿನ ಭೀತಿಯಿಂದಾಗಿ ನಗರ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾದಂತ ಕೆ ಆರ್ ಮಾರ್ಕೆಟ್ ಬಂದ್ ಆಗಿತ್ತು. ಹೀಗಾಗಿ ನಗರ ಜನರಿಗೆ ತರಕಾರಿ, ಸೊಪ್ಪು ಸೇರಿದಂತೆ ಅನೇಕ ಅಗತ್ಯ ವಸ್ತುಗಳಿಗೆ ತೊಂದರೆ ಕೂಡ ಆಗಿತ್ತು. ಅಲ್ಲದೇ ಕೆ ಆರ್ ಮಾರುಕಟ್ಟೆ ಇಲ್ಲದೇ ರೈತರು ಬೆಳೆದಂತ ಬೆಳೆಯನ್ನು ಮಾರಾಟ ಕೂಡ ಮಾಡಲಾಗದೇ ಬೆಲೆ ಕುಸಿತದ ಸಂಕಷ್ಟವನ್ನು ಎದುರಿಸುವಂತಾಗಿದೆ.

ಇದೀಗ ಈ ಸಮಸ್ಯೆಗೆ ಸೆಪ್ಟೆಂಬರ್ 1ರಂದು ಇತಿಶ್ರೀ ಬೀಳಲಿದೆ. ಸೆಪ್ಟೆಂಬರ್ 1ರಿಂದ ಕೆ ಆರ್ ಮಾರುಕಟ್ಟೆ ಆರು ತಿಂಗಳ ಬಳಿಕ ತೆರೆಯಲಿದೆ. ರೈತರು, ಅನೇಕ ಕೂಲಿ ಕಾರ್ಮಿಕರಿಗೆ ಮತ್ತೆ ಕೆ ಆರ್ ಮಾರುಕಟ್ಟೆ ತೆರೆದು ಕೊಳ್ಳಲಿದೆ.