ಬೆಂಗಳೂರು: ಪ್ರಧಾನಮಂತ್ರಿಯವರ ವ್ಯಕ್ತಿತ್ವಕ್ಕೆ ಮೆಚ್ಚಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ ಹಲವು ಕಾರ್ಯಕರ್ತರು – Vishwanews24
ಬೆಂಗಳೂರು: ಪ್ರಧಾನಮಂತ್ರಿಯವರ ವ್ಯಕ್ತಿತ್ವಕ್ಕೆ ಮೆಚ್ಚಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ ಹಲವು ಕಾರ್ಯಕರ್ತರು – Vishwanews24
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವ್ಯಕ್ತಿತ್ವಕ್ಕೆ ಮೆಚ್ಚಿ ಯುವ ಮುಖಂಡ ಎಂ ಪಿ ಪವನಕುಮಾರ್ ನೇತೃತ್ವದಲ್ಲಿ ಹಲವು ಮುಖಂಡರು, ಸಾವಿರಾರು ಕಾರ್ಯಕರ್ತರು ಜೆಡಿಎಸ್ ತೊರೆದು ಭಾರತೀಯ ಜನತಾ ಪಕ್ಷವನ್ನು ಸೇರಿದರು. ಅವರಿಗೆ ಕಂದಾಯ ಸಚಿವರಾದ ಆರ್ ಅಶೋಕ್ ಅವರು ಪಕ್ಷದ ಬಾವುಟ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ, ಶಾಸಕ ಎಂ ಕೃಷ್ಣಪ್ಪ, ಬೆಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ಆರ್ ರಮೇಶ್, ಪಿಇಎಸ್ ಸಂಸ್ಥಾಪಕ ದೊರೆಸ್ವಾಮಿ ನಾಯ್ಡು, ಯುವ ಮುಖಂಡ ಶರತ್ ಅಶೋಕ್, ಮುಖಂಡರಾದ ಎಸ್ ಕೆ ನಟರಾಜ್, ಎಲ್ ಶ್ರೀನಿವಾಸ್, ಸಂಗಾತಿ ವೆಂಕಟೇಶ್, ಲಕ್ಷ್ಮೀಕಾಂತ, ರಾಮಮೂರ್ತಿ, ವೆಂಕಟಸ್ವಾಮಿ ನಾಯ್ಡು, ಹೆಚ್ ಸುರೇಶ್, ಹೆಚ್ ನಾರಾಯಣ್, ಚೋಳರಾಜ್, ಸೋಮಶೇಖರ್, ಕಬ್ಬಾಳು ಉಮೇಶ್, ಗೋವಿಂದ ನಾಯ್ಡು, ಹನುಮಂತಯ್ಯ, ಶ್ರೀನಿವಾಸ್ ರೆಡ್ಡಿ, ಮಂಡಲ ಅಧ್ಯಕ್ಷ ರವಿ, ಪ್ರಧಾನ ಕಾರ್ಯದರ್ಶಿ ವಿಜಯ್(ಮೆಡಿಕಲ್) ಉಪಸ್ಥಿತರಿದ್ದರು.
