ಬೆಳಗಾವಿ ಸೈಕಲ್ನಲ್ಲಿ ಶವ ಸಾಗಣೆ : ಮನುಷ್ಯತ್ವ ಇಲ್ಲದ ಅಸಮರ್ಥ ಸರ್ಕಾರ , ಕೊರೊನಾ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲ : ಡಿ.ಕೆ.ಶಿವಕುಮಾರ್ -Vishwanews24
ಬೆಂಗಳೂರು: ರಾಜ್ಯದಲ್ಲಿ ಅಕಾರದಲ್ಲಿರುವ ಬಿಜೆಪಿ ಸರ್ಕಾರ ಅಸಮರ್ಥ ಮತ್ತು ಅಮಾನವೀಯ ಸರ್ಕಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಮೃತ ಪಟ್ಟ 70 ವರ್ಷದ ವ್ಯಕ್ತಿಯ ಮೃತ ದೇಹವನ್ನು ಸೈಕಲ್ನಲ್ಲಿ ತೆಗೆದುಕೊಂಡು ಅಂತ್ಯಸಂಸ್ಕಾರ ಮಾಡಿರುವ ಘಟನೆಯನ್ನು ಉಲ್ಲೇಖಿಸಿ ಡಿ.ಕೆ.ಶಿವಕುಮಾರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಳೆಯ ಪ್ರವಾಹದ ನಡುವೆಯೇ ಸಂಬಂಕರು ಕಷ್ಟ ಪಟ್ಟು ಸೈಕಲ್ನಲ್ಲಿ ಶವ ಸಾಗಿಸುತ್ತಿರುವ ವಿಡಿಯೋವನ್ನು ಡಿ.ಕೆ.ಶಿವಕುಮಾರ್ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
Relatives of a 70-yr-old dead person in Kittur, Belagavi had to carry the body for cremation on a bicycle in heavy rains.
CM @BSYBJP, where is your govt? Why was an ambulance not provided?
This incompetent Govt lacks humanity & has been a total failure in handling the pandemic. pic.twitter.com/PQfUe2oFXg
— DK Shivakumar (@DKShivakumar) August 17, 2020
ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನಿಮ್ಮ ಸರ್ಕಾರ ಎಲ್ಲಿದೆ. ಶವ ಸಾಗಿಸಲು ಆಂಬ್ಯುಲೆನ್ಸ್ ಯಾಕೆ ಒದಗಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದೊಂದು ಮನುಷ್ಯತ್ವ ಇಲ್ಲದ ಅಸಮರ್ಥ ಸರ್ಕಾರ ಎಂದು ಕಿಡಿಕಾರಿದ್ದು, ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ಧಾಳಿ ನಡೆಸಿದ್ದಾರೆ
