ಬೆಳಪು ಗ್ರಾಮದ ಅಭಿವೃದ್ಧಿಯ ಹರಿಕಾರ ಡಾ ದೇವಿಪ್ರಸಾದ್ ಶೆಟ್ಟಿ- ಕಾಂಗ್ರೇಸ್ ಅಭ್ಯರ್ಥಿಗಳ ಪರ ಬಿರುಸಿನ ಮತಯಾಚನೆ: vishwanews24

Featured, ಉಡುಪಿ

ಬೆಳಪು ಗ್ರಾಮದ ಅಭಿವೃದ್ಧಿಯ ಹರಿಕಾರ ಡಾ ದೇವಿಪ್ರಸಾದ್ ಶೆಟ್ಟಿ- ಕಾಂಗ್ರೇಸ್ ಅಭ್ಯರ್ಥಿಗಳ ಪರ ಬಿರುಸಿನ ಮತಯಾಚನೆ

ಬಿಜೆಪಿಯಳ್ಳು ಭರವಸೆಗಳಿಗೆ ಮರುಳಾಗಿ ಮೋಸಹೋಗದಿರಿ:- ದೇವಿಪ್ರಸಾದ್ ಶೆಟ್ಟಿ

ಕಾಪು: ಬೆಳಪು ಗ್ರಾಮದ ಸರ್ವತೋಮುಖ ಅಭಿವೃದ್ಧಿ ಮಾಡಿರುವ ಗ್ರಾಮಭಿವೃದ್ಧಿಯ ಹರಿಕಾರ ಡಾ ದೇವಿಪ್ರಸಾಧ್ ಶೆಟ್ಟಿ ಕಾಂಗ್ರೇಸ್ ಅಭ್ಯರ್ಥಿಗಳ ಬಿರುಸಿನ ಮತಯಾಚನೆ ನಡೆಸುತ್ತಿದ್ದಾರೆ.
ಕೊಂಬಗುಡ್ಡೆ-ಅಹಮ್ಮದಿಮೊಹಲ್ಲ-ಸೇರಿದAತೆ ವಿವಿಧ ವಾರ್ಡಿನಲ್ಲಿ ಕಾಂಗ್ರೇಸ್ ಅಭ್ಯರ್ಥಿಗಳ ಪರ ಮತಯಾಚನೆ
ನಡೆಸಿ ಮಾಧ್ಯಮಕ್ಕೆ ಪ್ರತಿಕ್ರೀಯೆ ನಿಡಿ” ಕಾಪು ಪುರಸಭೆಯ ಅಬಿವೃದ್ಧಿಗೆ ಸುಮಾರು ೧೨೦ ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ನಡೆಸಿರುವುದು ಕಾಂಗ್ರೇಸ್ ಸರಕಾರದ ಸಾಧನೆಯಾಗಿದೆ ಮಾತ್ರವಲ್ಲದೆ ಪುರಸಭೆಯನ್ನು ಪ್ರಗತಿಯ ಪಥದಲ್ಲಿ ಕೊಂಡೊಯ್ದು ೨೩ ವಾರ್ಡುಗಳಲ್ಲಿ ಕ್ರೀಯಾಶೀಲ ಯೋಜನೆ ಅನುಷ್ಠಾನ ಮಾಡಿರುವ ಕೀರ್ತಿ ಕಾಂಗ್ರೇಸ್ ಪಾಳಿಗಿದೆ ಆದರೇ ಬಿಜೆಪಿ ಏನು ಮಾಡಿದೆ ಎಂಬುದನ್ನು ಯಥಾದಾಖಲೆ ಸಮೇತ ತೋರಿಸಲಿ, ಸಾಮಾನ್ಯ ಬಡಜನರ ಮೇಲೆ ಕೋವಿಡ್ ಸಮಯದಲ್ಲಿ ತೆರಿಗೆ ಏರಿಸಿರುವುದಕ್ಕೆ ಅಥಾವ ಮಣಿಪುರ ಹೊಳೆಯಿಂದ ೬೧ ಕೋಟಿ ರೂಪಾಯಿ ವೆಚ್ಚದಲ್ಲಿ ಶುದ್ದ ಕುಡಿಯುವ ನೀರಿನ ಯೋಜನೆಗೆ ಅಡ್ಡಕಾಲು ಹಾಕಿದ್ದಕ್ಕೆ -ಅಥಾವ ಕಸ ವಿಲೇವಾರಿ ಘಟಕಕ್ಕೆ ತಡೆ ಮಾಡಿರುವ ಕಾರಣಕ್ಕೆ ಬಿಜೆಪಿಗೆ ಮತ ನೀಡ ಬೇಕಾ ಎಂದರು”
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಾಧಿಕಾರದ ಸಮಸ್ಯೆಗೆ ಪರಿಹಾರ ಒದಗಿಸುವೇವು ಎಂದು ಡಂಗುರ ಸಾರಿ ಬಂದಿದ್ದ ಬಿಜೆಪಿಗೆ ಯಾಕೆ ಇದುವರೆಗೆ ಸರಿ ಮಾಡಲಾಗಲಿಲ್ಲ ಇವ್ರಿಗೂ ಕೆವಲ ಅಧಿಕಾರದ ದಾಹ ಬಿಟ್ಟರೆ ಅಭಿವೃದ್ಧಿ ಅಗತ್ಯವಿಲ್ಲ ಎಂದರು.