ಬೆಳಪು ವ್ಯವಸಾಯ ಬ್ಯಾಂಕ್ ಗೆ ಆಡಳಿತ ಮಂಡಳಿ ಅವಿರೋಧ ಆಯ್ಕೆ, ಡಾ ಬೆಳಪು ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷ.

Featured, ಉಡುಪಿ

ಬೆಳಪು ವ್ಯವಸಾಯ ಬ್ಯಾಂಕ್ ಗೆ ಆಡಳಿತ ಮಂಡಳಿ ಅವಿರೋಧ ಆಯ್ಕೆ, ಡಾ ಬೆಳಪು ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷ.

ಕಾಪು: ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಗಳ ಮುಂದಿನ‌ ಅವಧಿಗೆ ಆಡಳಿತ ಮಂಡಳಿಯು ಅವಿರೋಧವಾಗಿ ಆಯ್ಕೆಗೊಂಡಿದೆ.

ಉಡುಪಿ ಜಿಲ್ಲೆಯ ಬೆಳಪು ಸೇವಾ ಸಹಕಾರಿ ಸಂಘದಲ್ಲಿ ಡಾ.ಎಮ್ ಎನ್ ರಾಜೇಂದ್ರ ಕುಮಾರ್ ಬಳಗದ 12 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕರಯಾಗಿದ್ದಾರೆ ಎಂದು ಅಧ್ಯಕ್ಷ ಡಾ.ಬೆಳಪು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತಡುತ್ತಾ ” ಕಳೆದ ಮೂವತ್ತು ವರ್ಷದಿಂದ ಬ್ಯಾಂಕಿನ ಅಧ್ಯಕ್ಷನಾಗಿ ಚುನಾವಣಾ ರಹಿತವಾಗಿ ಆಯ್ಕೆಯಾಗುತ್ತ ಬಂದಿದ್ದು ಇದೀಗ ಮತ್ತೆ 7 ನೇ ಅವಧಿಗೆ ಮತ್ತೆ ಅಧ್ಯಕ್ಷನಾಗಿರುವುದು ಸಹಕಾರಿ ಸಂಘದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ಚುನಾವಣೆಯ ವೆಚ್ಚ ಉಳಿತಾಯವಾದ ಮೂರು ಲಕ್ಷ ರೂಪಾಯಿಯನ್ನು ಸಂಘದ ಸದಸ್ಯರ ಶ್ರೇಯೋಭಿವೃದ್ದಿಗಾಗಿ ವಿನಯೋಗಿಸಲಾಗುವುದು ,ಅಶಕ್ತರಿಗರ,ಅನಾರೋಗ್ಯ ಪೀಡಿತರಿಗೆ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸಹಕರಿಸುವುದಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿಂಗೆ ನೂತನವಾಗಿ ಆಯ್ಕೆಯಾದ ನಿರ್ದೇಶಕರುಗಳು ಶ್ರೀವತ್ಸ ರಾವ್ ಕುಂಜೂರು,ಹತ್ವಾರಿ ಮೋಹನ್ ರಾವ್ ,ಗೋಪಾಲ ಪೂಜಾರಿ, ಪಾಂಡು ಸೇರಿಗಾರ,ಆಲಿಯಬ್ಬ ಬ್ಯಾರಿ,ಸೈಮನ್ ಮೆಂಡೋನ್ಸ,ಪಾಂಡು ಶೆಟ್ಟಿ ಎಲ್ಲೂರು,ವೇದಾವತಿ ಕುಂದರ್,ಮೀನ ಪೂಜಾರ್ತಿ,ವಿಮಲ ಅಂಚನ್,ಅನಿತಾ ಆನಂದ,ಬ್ಯಾಂಕಿನ‌ ವ್ಯವಸ್ಥಾಪಕಿ ಶ್ರೀಮತಿ ಸುಲೋಚನ ದೇವಾಡಿಗ ಉಪಸ್ಥಿತಿತರಿದ್ದರು.