ಬೆಳ್ತಂಗಡಿ: ಗಡಾಯಿಕಲ್ಲು ಚಾರಣಕ್ಕೆ ಮುಕ್ತ ; ದಿನಕ್ಕೆ 500 ಪ್ರವಾಸಿಗರಿಗೆ ಮಾತ್ರ ಅವಕಾಶ – vishwanews24
ಬೆಳ್ತಂಗಡಿ: ಗಡಾಯಿಕಲ್ಲು ಚಾರಣಕ್ಕೆ ಮುಕ್ತ ; ದಿನಕ್ಕೆ 500 ಪ್ರವಾಸಿಗರಿಗೆ ಮಾತ್ರ ಅವಕಾಶ
ಬೆಳ್ತಂಗಡಿ: ತಾಲೂಕಿನ ಗಡಾಯಿಕಲ್ಲು ಚಾರಣ ತಾಣವು ಸೆ. 17ರಿಂದ ಪ್ರವಾಸಿಗರಿಗೆ ಮತ್ತೆ ಮುಕ್ತವಾಗಲಿದೆ. ಮಳೆಗಾಲದ ಹಿನ್ನೆಲೆಯಲ್ಲಿ ಸುರಕ್ಷ ದೃಷ್ಟಿಯಿಂದ ಜು. 8ರಿಂದ ಚಾರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಮಳೆಯ ಪ್ರಮಾಣ ಕಡಿಮೆಯಾಗಿದ್ದು,ಚಾರಣಕ್ಕೆ ಅನುಕೂಲಕರ ವಾತಾವರಣ ಇರುವ ಹಿನ್ನೆಲೆಯಲ್ಲಿ ವನ್ಯ ಜೀವಿ ವಿಭಾಗವು ಪ್ರವಾಸಿಗರಿಗೆ ಗಡಾಯಿಕಲ್ಲು ಏರಲು ಅವಕಾಶ ಕಲ್ಪಿಸಿದೆ.
ದಿನಕ್ಕೆ ಗರಿಷ್ಠ 500 ಪ್ರವಾಸಿಗರಿಗೆ ಮಾತ್ರ ಗಡಾಯಿಕಲ್ಲು ಚಾರಣಕ್ಕೆ ಅವಕಾಶ ಇರಲಿದೆ. ಪ್ರವಾಸಿಗರು ಮುಂಗಡವಾಗಿ ಅಧಿಕೃತ ವೆಬ್ಸೈಟ್ನಲ್ಲಿ ನೋಂದಣಿ ಹಾಗೂ ಬುಕ್ಕಿಂಗ್ ಮಾಡಿಕೊಳ್ಳಬೇಕು. ಬಳಿಕ ನಿಗದಿತ ದಿನದಂದು ಗಡಾಯಿಕಲ್ಲು ಪ್ರವೇಶ ಸ್ಥಳಕ್ಕೆ ಆಗಮಿಸಿ ನಿಗದಿತ ಶುಲ್ಕ ಪಾವತಿಸಿ ಚಾರಣ ಕೈಗೊಳ್ಳಬಹುದು ಎಂದು ಬೆಳ್ತಂಗಡಿ ವನ್ಯಜೀವಿ ವಲಯದ ಅಧಿಕಾರಿ ಶರ್ಮಿಷ್ಟಾ ಅವರು ಮಾಹಿತಿ ನೀಡಿದ್ದಾರೆ.
ಕುಂದಾಪುರ: ಮೀನುಗಾರರ ಹಿತ ಕಾಯಲು ಸರಕಾರ ಬದ್ಧ: ಸಚಿವ ಬಸವಂತಪ್ಪ – vishwanews24
