ಬೆಳ್ತಂಗಡಿ ತಾಲೂಕಿನಲ್ಲಿ ರಾಜ್ಯದಲ್ಲೇ ಪ್ರಪ್ರಥಮವಾಗಿ ಅಕ್ರಮ-ಸಕ್ರಮ ಅರ್ಜಿ ವಿಲೇವಾರಿ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಅನುಷ್ಠಾನ : ಹರೀಶ ಪೂಂಜ – Vishwanews24
ಬೆಳ್ತಂಗಡಿ ತಾಲೂಕಿನಲ್ಲಿ ರಾಜ್ಯದಲ್ಲೇ ಪ್ರಪ್ರಥಮವಾಗಿ ಅಕ್ರಮ-ಸಕ್ರಮ ಅರ್ಜಿ ವಿಲೇವಾರಿ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಅನುಷ್ಠಾನ : ಹರೀಶ ಪೂಂಜ
ಬೆಳ್ತಂಗಡಿ: ಜನರ ಬಳಿ ಆಡಳಿತ ಸೇವೆ ಎಂಬ ಹೊಸ ಕಲ್ಪನೆಯಂತೆ ಸರಕಾರದ ಯೋಜನೆಗಳು ಜನರಿಗೆ ಪಾರದರ್ಶಕವಾಗಿ ಸಿಗಬೇಕೆಂಬ ನಿಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ರಾಜ್ಯದಲ್ಲೇ ಪ್ರಪ್ರಥಮವಾಗಿ ಅಕ್ರಮ-ಸಕ್ರಮ ಅರ್ಜಿ ವಿಲೇವಾರಿಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಅನುಷ್ಠಾನ ಮಾಡಲಾಗುತ್ತಿದ್ದು, ನ.22ರಂದು ಇದಕ್ಕೆ ಚಾಲನೆ ನೀಡಲಾಗುವುದು ಎಂದು ಶಾಸಕ ಹರೀಶ್ ಪೂಂಜ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿಅಕ್ರಮ-ಸಕ್ರಮ ಅರ್ಜಿಗಳು ತಾಂತ್ರಿಕ ಸಮಸ್ಯೆಯಿಂದ ವಿಲೇವಾರಿ ಆಗದೇ ಬಾಕಿ ಉಳಿದಿದೆ. ಸರಕಾರದ ಮಟ್ಟದಲ್ಲಿ ಪ್ರಯತ್ನಗಳು ಆಗುತ್ತಿದೆ. ತಾಲೂಕಿನಲ್ಲಿಸುಮಾರು 32 ಸಾವಿರಕ್ಕೂ ಹೆಚ್ಚು ಅರ್ಜಿಗಳಿವೆ.
ಅದರಲ್ಲಿ ಕುಮ್ಕಿಗೆ ಸಂಬಂಧಪಟ್ಟ ಅರ್ಜಿಗಳೇ ಅಧಿಕವಾಗಿದೆ. ಕಾನೂನು ಹಾಗೂ ತಾಂತ್ರಿಕ ಸಮಸ್ಯೆಯಿಂದ ಕುಮ್ಕಿ ಜಮೀನು ಅರ್ಜಿಗಳನ್ನು ಹೊರತುಪಡಿಸಿ ಸರಕಾರಿ ಭೂಮಿಯಲ್ಲಿ ಕೃಷಿ ಮಾಡಿದವರ ಅರ್ಜಿಯನ್ನು ಪರಿಗಣಿಸಲಾಗಿದ್ದು, ಅವರಿಗೆ ಆಯಾಯ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಅರ್ಜಿ ವಿಲೇವಾರಿ ಮಾಡಿ, ಹಕ್ಕುಪತ್ರ ವಿತರಿಸಲಾಗುವುದು. ದಿನಾಂಕ ನಿಗದಿ ಪಡಿಸಿದ ದಿನದಂದು ಅರ್ಜಿದಾರರು ಹಾಜರಿರಬೇಕು. ಎರಡು ಹಂತದಲ್ಲಿಅರ್ಜಿ ವಿಲೇವಾರಿ ಮಾಡಲಾಗುತ್ತದೆ ಎಂದು ಹೇಳಿದರು.
ಕುಂದಾಪುರ: ಕಾಂಗ್ರೆಸ್ ಪಕ್ಷದ ಟಿಕೇಟ್ ಆಕಾಂಕ್ಷಿಯಾಗಿ ಅಶೋಕ್ ಪೂಜಾರಿ ಅರ್ಜಿ ಸಲ್ಲಿಕೆ – Vishwanews24
ಮುಖ್ಯಮಂತ್ರಿ ಬೊಮ್ಮಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕುಮ್ಕಿ ಹಕ್ಕು ನೀಡಲು ಅಡ್ಡಿಯಾಗಿರುವ ತಾಂತ್ರಿಯ ಸಮಸ್ಯೆ ನಿವಾರಿಸಲು ಕೇಂದ್ರದ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಸ್ಪಂದನೆಯೂ ಸಿಕ್ಕಿದೆ. ತಾಂತ್ರಿಕ ಅಡೆತಡೆಗಳು ಶೀಘ್ರ ನಿವಾರಣೆಯಾಗಲಿದ್ದು ಒಂದೆರಡು ತಿಂಗಳಿನಲ್ಲಿ ಸರಕಾರವು ಅಲ್ಪ ದರ ನಿಗದಿ ಮಾಡಿ 10 ಎಕರೆ ಒಳಗಿನ ಕುಮ್ಕಿ ಜಮೀನನ್ನು ರೈತರಿಗೆ ವಿತರಿಸಲು ಕ್ರಮ ಕೈಗೊಳ್ಳುತ್ತದೆ ಎಂದರು.
ಅಕ್ರಮ-ಸಕ್ರಮ ಅರ್ಜಿ ವಿಲೇವಾರಿ ಮತ್ತು 94ಸಿ, 94ಸಿಸಿ ಪಡೆಯಲು ಯಾವುದೇ ಅಧಿಕಾರಿಗಳಿಗೆ ಲಂಚ ನೀಡಬೇಡಿ. ಅಧಿಕಾರಿಗಳು ಅಥವಾ ಮಧ್ಯವರ್ತಿಗಳು ಲಂಚ ಕೇಳಿದರೆ ನನ್ನ ಅಥವಾ ತಹಸೀಲ್ದಾರರ ಗಮನಕ್ಕೆ ತರಬೇಕು. ತಕ್ಷಣ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಡಿಸೆಂಬರ್ ಅಂತ್ಯದಲ್ಲಿ94ಸಿ, 94ಸಿಸಿ ಅರ್ಜಿ ವಿಲೇವಾರಿ: ಕಾನೂನು ಹಾಗೂ ತಾಂತ್ರಿಕ ಸಮಸ್ಯೆಯಿಂದ ಫಲಾನುಭವಿಗಳಿಗೆ ವಿತರಿಸಲು ವಿಳಂಬವಾಗಿದ್ದ 94ಸಿ, 94ಸಿಸಿ ಅರ್ಜಿಗಳನ್ನು ಡಿಸೆಂಬರ್ ಅಂತ್ಯದೊಳಗೆ ವಿಲೇವಾರಿ ಮಾಡಿ ಹಕ್ಕುಪತ್ರಗಳನ್ನು ವಿತರಿಸಲಾಗುವುದು. ಅರಣ್ಯ ಇಲಾಖೆ ಹಾಗೂ ಇನ್ನಿತರ ತಾಂತ್ರಿಕ ಸಮಸ್ಯೆಗಳಿಂದಾಗಿ ತಾಲೂಕಿನ ನಾನಾ ಗ್ರಾಮಗಳಲ್ಲಿಮನೆ ಕಟ್ಟಿ ವಾಸ ಮಾಡುತ್ತಿರುವ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲು ಸಾಧ್ಯವಾಗಿಲ್ಲ.
ಇಂದಿನಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಆರಂಭ – Vishwanews24
ಈ ಕುರಿತು ಈಗಾಗಲೇ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ಫಲಾನುಭವಿಗಳ ಸಮಸ್ಯೆ ಕುರಿತು ಸರಕಾರದ ಗಮನ ಸೆಳೆಯಲಾಗಿತ್ತು. ಇದರ ಕುರಿತು ಅರ್ಹ ಫಲಾನುಭವಿಗಳಿಗೆ ಅನುಕೂಲ ಆಗುವಂತೆ, ಕಾನೂನಾತ್ಮಕ ಆಗಿರುವ 94ಸಿ, 94ಸಿಸಿ ಅರ್ಜಿಗಳನ್ನು ಕೆಲವೇ ದಿನಗಳಲ್ಲಿಸಮಸ್ಯೆ ಇತ್ಯರ್ಥಗೊಳಿಸಲಾಗುತ್ತದೆ ಎಂದರು.
ಅಕ್ರಮ ಸಕ್ರಮ ಸಮಿತಿ ಸದಸ್ಯ ಜಯಂತ್ ಕೋಟ್ಯಾನ್ ಉಪಸ್ಥಿತರಿದ್ದರು.
ಅಕ್ರಮ ಸಕ್ರಮ ವಿಲೇವಾರಿ ದಿನಾಂಕ ವಿವರ
ನ. 22ರಂದು ಬೆಳಿಗ್ಗೆ 10.30ಕ್ಕೆ ನಾರಾವಿ ಗ್ರಾ. ಪಂ. ಆವರಣದಲ್ಲಿ, 12.30ಕ್ಕೆ ಅಡಿಂಜೆ ಗ್ರಾ.ಪಂ., 3.30 ಆರಂಬೋಡಿ ಗ್ರಾ. ಪಂ. ಆವರಣ.
ನ.23ರಂದು ಬೆಳಿಗ್ಗೆ 10.30ಕ್ಕೆ ಶಿಬಾಜೆ ಗ್ರಾ. ಪಂ., 12.30ಕ್ಕೆ ಶಿಶಿಲ ಗ್ರಾ. ಪಂ., 3.30ಕ್ಕೆ ಅರಸಿನಮಕ್ಕಿ ಗ್ರಾ.ಪಂ. ಆವರಣ.
ನ.24ಕ್ಕೆ ಬೆಳಿಗ್ಗೆ 10ಕ್ಕೆ ಮಲವಂತಿಗೆ ಗ್ರಾ. ಪಂ. 12.30ಕ್ಕೆ ಕಡಿರುದ್ಯಾವರ ಗ್ರಾ. ಪಂ., 3.30ಕ್ಕೆ ನಾವೂರು ಗ್ರಾ.ಪಂ. ಆವರಣ.
ನ.25ಕ್ಕೆ ಬೆಳಿಗ್ಗೆ 10ಕ್ಕೆ ಬಂದಾರು ಗ್ರಾ. ಪಂ., 12.30ಕ್ಕೆ ಕಣಿಯೂರು ಗ್ರಾ. ಪಂ., 3.30ಕ್ಕೆ ಬಾರ್ಯ ಗ್ರಾ.ಪಂ. ಆವರಣ.
ನ29ಕ್ಕೆ ಬೆಳಿಗ್ಗೆ 10.30ಕ್ಕೆ ಶಿರ್ಲಾಲು ಗ್ರಾ. ಪಂ., 12.30ಕ್ಕೆ ಅಳದಂಗಡಿ ಗ್ರಾ. ಪಂ. ಆವರಣ.
ನ 30ಕ್ಕೆ ಬೆಳಿಗ್ಗೆ 10.30ಕ್ಕೆ ಮುಂಡಾಜೆ ಗ್ರಾ. ಪಂ., 12.30ಕ್ಕೆ ನೆರಿಯ ಗ್ರಾ. ಪಂ., 3.30ಕ್ಕೆ ಕಲ್ಮಂಜ ಗ್ರಾ.ಪಂ. ಆವರಣ.
ಡಿ.1ರಂದು ಬೆಳಿಗ್ಗೆ 10.30ಕ್ಕೆ ಮಚ್ಚಿನ ಗ್ರಾ. ಪಂ., 12.30ಕ್ಕೆ ಮಾಲಾಡಿ ಗ್ರಾ.ಪಂ., 3.30ಕ್ಕೆ ಕಳಿಯ ಗ್ರಾ.ಪಂ. ಆವರಣ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ ಕಾಂತಾರ ನಟಿ ಸಪ್ತಮಿ ಗೌಡ..
