ಬೈಂದೂರು: ನಾಡದೋಣಿ ದುರಂತ: ಓರ್ವ ಮೀನುಗಾರನ ಮೃತದೇಹ ಪತ್ತೆ -Vishwanews24

Featured, ಉಡುಪಿ

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಡೇರಿಯಲ್ಲಿ ನಾಡದೋಣಿಯೊಂದು ಬ್ರೇಕ್ ವಾಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ನಡೆದ ಅವಘಡದಲ್ಲಿ ನಾಲ್ವರು ಸಮುದ್ರಪಾಲಾಗಿದ್ದು, ಓರ್ವ ಮೀನುಗಾರನ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ.ನಾಗರಾಜ್ ಖಾರ್ವಿ ಎಂಬುವರ ಮೃತದೇಹವು ಪತ್ರೆಯಾಗಿದ್ದು , ಮಂಜುನಾಥ್ ಖಾರ್ವಿ, ಲಕ್ಷ್ಮಣ್ ಖಾರ್ವಿ ಮತ್ತು ಶೇಖರ್ ಖಾರ್ವಿಗಾಗಿ ಹುಡುಕಾಟ ಮುಂದುವರೆದಿದೆ.

ಸಾಗರಶ್ರೀ ಎಂಬ ನತದೃಷ್ಟ ಬೋಟ್ ನಲ್ಲಿ ಒಟ್ಟು ಹನ್ನೆರಡು ಮಂದಿ ನಿನ್ನೆ ಮೀನುಗಾರಿಕೆಗೆ ತೆರಳಿದ್ದರು.ವಾಪಾಸಾಗುವ ವೇಳೆ ದೋಣಿಯು ಬ್ರೇಕ್ ವಾಟರ್ ಗೆ ಢಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಮುಳುಗಿತ್ತು.ಈ ವೇಳೆ ಎಂಟು ಮಂದಿ ಮೀನುಗಾರರನ್ನು ರಕ್ಷಿಸಲಾಗಿತ್ತು.ನಾಲ್ವರು ಸಮುದ್ರ ಪಾಲಾಗಿದ್ದರು.