ಬೊಮ್ಮಾಯಿ ಮತ್ತೆ ಜೆಡಿಎಸ್ಗೆ ಬಂದರೆ ಅದ್ದೂರಿ ಸ್ವಾಗತ : ಸಿ.ಎಂ. ಇಬ್ರಾಹಿಂ – Vishwanews24
ಸಿಎಂ ಕೇಶವಕೃಪಾ – ಬಸವಕೃಪಾ ನಡುವೆ ಸಿಕ್ಕು ಒದ್ದಾಡುತ್ತಿದ್ದಾರೆ..
ಬೊಮ್ಮಾಯಿ ಮತ್ತೆ ಜೆಡಿಎಸ್ಗೆ ಬಂದರೆ ಖಂಡಿತಾ ಅವರನ್ನು ಸ್ವಾಗತಿಸುತ್ತೇವೆ ..
ಜೆಡಿಎಸ್ನಲ್ಲಿದ್ದಾಗ ಟಿಕೆಟ್ ನೀಡುತ್ತಿದ್ದ ಬೊಮ್ಮಾಯಿಯವರಿಗೆ ಈಗ ಟಿಕೆಟ್ಗಾಗಿ ಕಾಯಬೇಕಾದ ಪರಿಸ್ಥಿತಿ..
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ
ಹುಬ್ಬಳ್ಳಿ : ಜೆಡಿಎಸ್ನಲ್ಲಿದ್ದಾಗ ಟಿಕೆಟ್ ನೀಡುತ್ತಿದ್ದ ಬಸವರಾಜ ಬೊಮ್ಮಾಯಿಯವರಿಗೆ ಈಗ ಟಿಕೆಟ್ಗಾಗಿ ಕಾಯಬೇಕಾದ ಪರಿಸ್ಥಿತಿ ಬಂದಿದೆ. ಅವರು ಮತ್ತೆ ಜೆಡಿಎಸ್ಗೆ ಬಂದರೆ ಅದ್ದೂರಿಯಾಗಿ ಸ್ವಾಗತಿಸುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬೊಮ್ಮಾಯಿಯವರು ಒಂದೆಡೆ ಕೇಶವ ಕೃಪಾ, ಮತ್ತೊಂದೆಡೆ ಬಸವ ಕೃಪಾದ ನಡುವೆ ಮುಖ್ಯಮಂತ್ರಿಯಾಗಿ ಸಿಲುಕಿಕೊಂಡಿದ್ದಾರೆ. ಅವರ ಪರಿಸ್ಥಿತಿ ಏನಾಗಿದೆ ಎಂಬುದು ತಿಳಿದಿದೆ. ಅವರು ಮತ್ತೆ ಬಂದರೆ ಖಂಡಿತಾ ಅವರನ್ನು ಸ್ವಾಗತಿಸುತ್ತೇವೆ. ಬೇಡ ಎನ್ನುವುದಿಲ್ಲ ಎಂದರು.
🌀 ಧರ್ಮಸ್ಥಳ : ಕಾಂಗ್ರೆಸ್ ಮುಖಂಡ ಚಂದನ್ ಕಾಮತ್ ಬಿಜೆಪಿ ಸೇರ್ಪಡೆ – Vishwanews24
ಕೋನರೆಡ್ಡಿಯವರು ಟಿಕೆಟ್ಗೆ ಅರ್ಜಿ ಹಾಕಿದ್ದಾರೆ. ಇನ್ನು ಮಾಜಿ ಸಿಎಂ ಬಿಎಸ್ವೈ ಸ್ಥಿತಿಯಂತೂ ತಬ್ಬಲಿ ಆದೆಯಾ ಮಗನೇ ಎನ್ನುವಂತಾಗಿದೆ ಎಂದು ಇದೇ ವೇಳೆ ಅವರು ವ್ಯಂಗ್ಯವಾಡಿದರು.
90ರ ದಶಕದಲ್ಲಿದ್ದ ಜನತಾದಳದ ಪುನಃ ಸ್ಥಾಪನೆಯೇ ನಮ್ಮ ಉದ್ದೇಶ. ಅದಕ್ಕಾಗಿ ಸರ್ವಪ್ರಯತ್ನದಲ್ಲಿ ತೊಡಗಿದ್ದೇವೆ. ಬೆಂಗಳೂರಿನಲ್ಲಿ ಹಳೆ ಜನತಾದಳ ಒಗ್ಗೂಡಿಸಲು ಮಹಿಮಾ ಪಟೇಲ್ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇನ್ನು ಕುಮಾರಸ್ವಾಮಿ ನೇತೃತ್ವದ ಪಂಚರತ್ನ ಯಾತ್ರೆ ಸಾಗುತ್ತಿದ್ದು, ಜನ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
