ಬೊಮ್ಮಾರಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಈಗಾಗಲೇ ಉಚ್ಚಾಟಿಸಲಾಗಿದೆ : ಜಿತೇಂದ್ರ ಶೆಟ್ಟಿ  – vishwanews24

Featured, ಉಡುಪಿ

ಬೊಮ್ಮಾರಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಈಗಾಗಲೇ ಉಚ್ಚಾಟಿಸಲಾಗಿದೆ : ಜಿತೇಂದ್ರ ಶೆಟ್ಟಿ 

ಬೊಮ್ಮಾರಬೆಟ್ಟು ಗ್ರಾಮ ಪಂಚಾಯತ್‌ ಉಪಾಧ್ಯಕ್ಷರಾದ ಹರೀಶ್ ಸಾಲ್ಯಾನ್‌ರವರನ್ನು ಪಕ್ಷ ವಿರೋಧಿ ಚಟುವಟಿಕೆಯಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿರುತ್ತೇವೆ.

ಕಳೆದ ಹಲವು ವರ್ಷಗಳಿಂದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬೊಮ್ಮಾರಬೆಟ್ಟು ಗ್ರಾಮದಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರು ಸ್ಪಷ್ಟ ಬಹುಮತದಿಂದ ಆಯ್ಕೆಯಾಗಿದ್ದರು. ಕಾಂಗ್ರೆಸ್ ಪಕ್ಷದ ಕುತಂತ್ರದಿಂದ ಬಿಜೆಪಿ ಬೆಂಬಲಿತ ಸದಸ್ಯರಲ್ಲಿ ಒಡಕು ಮೂಡಿಸಿ ಎರಡು ಬಾರಿ ಕಾಂಗ್ರೆಸ್ ಪಕ್ಷ ಹಿಂಬಾಗಿಲಿನಿಂದ ಆಡಳಿತ ನಡೆಸಿದ್ದು, ಗ್ರಾಮದ ಜನಸಾಮಾನ್ಯರಿಗೆ ತಿಳಿದ ವಿಚಾರ. ಅಂತೆಯೇ 2023ರ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಈ ತಂತ್ರ ವಿಫಲಗೊಳಿಸುವ ಸಲುವಾಗಿ ಉಚ್ಚಾಟಿತ ಸದಸ್ಯ ಮತ್ತು ಆತನೊಂದಿಗೆ ಇದ್ದ ಸದಸ್ಯರೊಂದಿಗೆ ಬೊಮ್ಮಾರಬೆಟ್ಟುವಿನ ಅಧ್ಯಕ್ಷ ಸ್ಥಾನವನ್ನು ಬಿಜೆಪಿ ಪಡೆದಿರುತ್ತದೆ.

ಈ ಹೊಂದಾಣಿಕೆಯಿಂದ ಆತ ಉಪಾದ್ಯಕ್ಷನಾಗಿರುತ್ತಾನೆ. ಆದರೆ ಈತನನ್ನು ಈವರೆಗೂ ಪಕ್ಷಕ್ಕೆ ಮರುಸೇರ್ಪಡೆಗೊಳಿಸದೆ ಉಚ್ಚಾಟನೆಯನ್ನು ರದ್ದು ಮಾಡಿರುವುದಿಲ್ಲ ಮತ್ತು ಪಕ್ಷದ ಯಾವುದೇ ಜವಾಬ್ದಾರಿ ನೀಡಿರುವುದಿಲ್ಲ ಹಾಗಾಗಿ ಈತನ ಯಾವುದೇ ಕಾರ್ಯವೈಖರಿಗೆ ಬಿಜೆಪಿ ಪಕ್ಷ ಬೆಂಬಲಿಸುವುದಿಲ್ಲ ಮತ್ತು ಈತನೊಂದಿಗೆ ಪಂಚಾಯತ್‌ ಸದಸ್ಯ ಶಾಸಕರ ಕಚೇರಿಯಲ್ಲಿ ಕಾರ್ಯಾಚರಿಸುತ್ತಿದವನನ್ನು ಈ ಘಟನೆ ನಡೆದ ತಕ್ಷಣವೇ ಶಾಸಕರು ಕಚೇರಿಯಿಂದ ವಜಾಗೊಳಿಸಿರುತ್ತಾರೆ.

ದಿನಾಂಕ 01-09-2025 ರಂದು ಹಿರಿಯಡ್ಕ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದ ಸಂದರ್ಭ ಕೆಲವು ಕಾಂಗ್ರೆಸ್‌ನ ಸ್ಥಳೀಯ ನಾಯಕರು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಬೊಮ್ಮಾರಬೆಟ್ಟು ಗ್ರಾಮ ಪಂಚಾಯತ್ ಮಹಿಳಾ ಅಧ್ಯಕ್ಷರನ್ನು ನಿಂದಿಸುವುದು ಖಂಡನೀಯ ಇವತ್ತಿನ ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಗ್ರಾಮ ಪಂಚಾಯತ್ ಸದಸ್ಯರಿರಬಹುದು ಮತ್ತು ಸ್ಥಳೀಯ ನಾಯಕರಿರಬಹುದು, ಸ್ಥಳೀಯವಾಗಿ ನಡೆಯುವ ಅವ್ಯವಹಾರದಲ್ಲಿ ಭಾಗಿಯಾಗಿರುವುದು ಸ್ಥಳೀಯವಾಗಿ ಗ್ರಾಮಸ್ಥರಿಗೆ ತಿಳಿದಿಲ್ಲವೆ ಆದರೂ ರೋಷಾವೇಶರಾಗಿ ವೇದಿಕೆಯಲ್ಲಿ ಮಾತನಾಡಿರುವುದು ಸ್ಥಳೀಯ ನಾಯಕರು ತಮ್ಮ ಪಕ್ಷದ ಕಾರ್ಯಕರ್ತರು ಮಾಡುವ ಅವ್ಯವಹಾರದ ಬಗ್ಗೆ ಗಮನ ಹರಿಸಲಿ ಮತ್ತು ಬೊಮ್ಮಾರಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರೀಶದ ಸಾಲ್ಯಾನ್ ಮತ್ತು ಕ್ಷೇತ್ರದ ಯಾರೇ ಸದಸ್ಯರ/ಕಾರ್ಯಯರ್ತರ ಈ ಅವ್ಯವಹಾರವನ್ನು ಬಿಜೆಪಿ ಪಕ್ಷ ಮತ್ತು ಶಾಸಕರು ಯಾವುದೇ ರೀತಿ ಬೆಂಬಲಿಸುವುದಿಲ್ಲ ಮತ್ತು ಉಗ್ರವಾಗಿ ಕಾಪು ಬಿಜೆಪಿ ಖಂಡಿಸುತ್ತದೆ.

Leave a Reply