ಭಟ್ಕಳ : ಅಲೆಗಳ ಹೊಡೆತಕ್ಕೆ ಸಮುದ್ರ ಮಧ್ಯೆ ಸಿಲುಕಿದ ಮಲ್ಪೆ ಬೋಟ್ ; ಮೀನುಗಾರರ ರಕ್ಷಣೆ – vishwanews24

Featured, ಉಡುಪಿ

ಭಟ್ಕಳ : ಅಲೆಗಳ ಹೊಡೆತಕ್ಕೆ ಸಮುದ್ರ ಮಧ್ಯೆ ಸಿಲುಕಿದ ಮಲ್ಪೆ ಬೋಟ್ ; ಮೀನುಗಾರರ ರಕ್ಷಣೆ

ಭಟ್ಕಳ : ಉಡುಪಿ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಭಟ್ಕಳ ಸಮೀಪ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುವ ಸ್ಥಿತಿಗೆ ತಲುಪಿದ್ದು ಬೋಟಿನಲ್ಲಿದ್ದ ಮೀನುಗಾರರನ್ನು ರಕ್ಷಿಸಲಾಗಿದೆ.

ವಾಯುಭಾರ ಕುಸಿತದಿಂದ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದ ಕಾರಣ ಅಲೆಗಳ ಅಬ್ಬರಕ್ಕೆ ಸಿಲುಕಿ ಸಾಯಿ ಚರಣ್ ಹೆಸರಿನ ಈ ಬೋಟ್‌ಗೆ ಹಾನಿಯಾಗಿದೆ. ಬೋಟ್‌ನ ಫ್ಯಾನ್‌ಗೆ ಮೀನಿನ ಬಲೆ ಸಿಲುಕಿತ್ತು. ಹೀಗಾಗಿ ಮುಂದೆ ಸಾಗಲಾಗದೆ ಮುಳುಗುವ ಸ್ಥಿತಿಯಲ್ಲಿದ್ದ ಬೋಟನ್ನು ಭಟ್ಕಳದ ಇನ್ನೊಂದು ಮೀನುಗಾರಿಕಾ ಬೋಟ್‌ನವರು ರಕ್ಷಿಸಿ ಹಗ್ಗ ಕಟ್ಟಿ ಎಳೆದು ತರುತ್ತಿದ್ದರು.

ಅನ್ನಭಾಗ್ಯದ 5 ಕೆಜಿ ಅಕ್ಕಿಯ ಹಣ ನೀಡುವುದು ಮುಂದುವರಿಕೆ : ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ – vishwanews24

ಆದರೆ ತೀರಕ್ಕೆ ತಲುಪುವ ಮೊದಲೇ ಹಗ್ಗ ತುಂಡಾಗಿ ಭಟ್ಕಳದ ಹೆಬಳೆ ಪಂಚಾಯತ್‌ನ ತೆಂಗಿನಗುಂಡಿ ವ್ಯಾಪ್ತಿಯ ಸಮುದ್ರ ತೀರದ ಕಲ್ಲಿನ ರಾಶಿಯಲ್ಲಿ ಬೋಟ್‌ ಸಿಲುಕಿಕೊಂಡಿದೆ. ಅಲೆಗಳ ಅಬ್ಬರ ಹೆಚ್ಚಾಗ್ಗಿರುವುದರಿಂದ ಬೋಟನ್ನು ಹೊರತರಲಾರದೆ ಅಲ್ಲಿಯೇ ಬಿಡಲಾಗಿದ್ದು ಲಕ್ಷಾಂತರ ಮೌಲ್ಯದ ಸೊತ್ತುಗಳು ದೋಣಿಯಲ್ಲಿವೆ . ಬೋಟ್‌ನಲ್ಲಿದ್ದ ಮೀನುಗಾರರು ಸುರಕ್ಷಿತವಾಗಿ ದಡ ಸೇರಿದ್ದಾರೆ.

Leave a Reply