ಭಯೋತ್ಪಾದನೆ ನಿಲ್ಲಿಸದಿದ್ದರೆ ಭಾರತದಿಂದ ಪಾಕ್ ಗೆ ಹರಿಯುವ ನದಿ ನೀರನ್ನು ನಿಲ್ಲಿಸಬೇಕಾಗುತ್ತದೆ : ನಿತಿನ್ ಗಡ್ಕರಿ -Vishwanews24
ನವದೆಹಲಿ : ಪಾಕಿಸ್ತಾನ ಉಗ್ರರನ್ನು ಮುಂದೆಯೂ ಬೆಂಬಲಿಸುತ್ತಿದ್ದರೆ ಭಾರತದಿಂದ ಪಾಕಿಸ್ತಾನಕ್ಕೆ ಹರಿಯುವ ನೀರನ್ನು ನಿಲ್ಲಿಸಬೇಕಾಗುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಕಿಡಿ ಕಾರಿದ್ದಾರೆ.
ಪಾಕಿಸ್ತಾನಕ್ಕೆ ಭಾರತದಿಂದ ಮೂರು ನದಿಗಳು ಹರಿಯುತ್ತವೆ. ಅದನ್ನು ಸ್ಥಗಿತ ಮಾಡಲು ನಮಗೆ ಇಷ್ಟವಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ ನೀರಿನ ಒಪ್ಪಂದ ಶಾಂತಯುತವಾಗಿ ಮತ್ತು ಸ್ನೇಹದಿಂದ ಇರಬೇಕಾಗಿತ್ತು. ಆದರೆ ಅದು ಸಂಪೂರ್ಣವಾಗಿ ಅಳಿಸಿ ಹೋಗಿದೆ. ಆದುದರಿಂದ ನಾವು ಕೂಡ ಈ ಒಪ್ಪಂದವನ್ನು ಪಾಲಿಸುವುದಿಲ್ಲ ಎಂದು ಗಡ್ಕರಿ ಹೇಳಿದ್ದಾರೆ.
ಅಲ್ಲದೆ ಪಾಕಿಸ್ತಾನ ನಿರಂತರವಾಗಿ ಉಗ್ರರನ್ನು ಬೆಂಬಲಿಸಿಕೊಂಡು ಬಂದಿದೆ. ಅದು ಭಯೋತ್ಪಾದನೆಯನ್ನು ನಿಲ್ಲಿಸುವುದೇ ಇಲ್ಲ.ಹೀಗೆ ಮುಂದುವರೆದರೆ ಪಾಕ್ ಗೆ ಹರಿಯುವ ನೀರನ್ನು ಸ್ಥಗಿತ ಮಾಡುವುದಲ್ಲದೆ, ನಮಗೆ ಬೇರೆ ಆಯ್ಕೆಗಳಿಲ್ಲ. ಈ ಬಗ್ಗೆ ಭಾರತ ಅಧ್ಯಯನ ನಡೆಸುತ್ತಿದೆ. ಈ ನೀರು ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನಕ್ಕೆ ಹರಿಯುವಂತೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
