ಭವ್ಯ ಮೆರವಣೆಗೆ ಮೂಲಕ ಉಡುಪಿಯಿಂದ ಶ್ರೀ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊರಟ ಬೆಳ್ಳಿರಥ – vishwanews24

Featured, ದಕ್ಷಿಣ ಕನ್ನಡ

ಭವ್ಯ ಮೆರವಣೆಗೆ ಮೂಲಕ ಶ್ರೀ ಕುಕ್ಕೆ ಸುಬ್ರಹ್ಮಣ್ಯಕ್ಕೆ ಉಡುಪಿಯಿಂದ ಹೊರಟ ಬೆಳ್ಳಿರಥ

ಉಡುಪಿ: ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೆ ಡಾ.ರೇಣುಕಾ ಪ್ರಸಾದ್ ಕುರುಂಜಿ ಹಾಗೂ ಅವರ ಕುಟುಂಬಸ್ಥರಿಂದ ಬೆಳ್ಳಿರಥ ಸಮರ್ಪಿಸಲಿದ್ದು, ಈ ಬೆಳ್ಳಿ ರಥವು ಕೋಟೇಶ್ವರದಿಂದ ಹೊರಟು ಇಂದು ಅಂಬಾಗಿಲು ಜಂಕ್ಷನ್‌ಗೆ ತಲುಪಿದ ಸಂದರ್ಭದಲ್ಲಿ ಭವ್ಯ ಸ್ವಾಗತಿಸಲಾಯಿತು.

ಯಾವುದೇ ವಿಘ್ನಗಳು ಬಾರದೇ ಒಳ್ಳೆಯ ರೀತಿಯಲ್ಲಿ ಈ ರಥವು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತಲುಪಲಿ ಎಂದು ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ, ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾಧವ ಬನ್ನಂಜೆ, ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಮಮತಾ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಮಹಾಬಲ ಕುಂದರ್, ಕಾಂಗ್ರೆಸ್ ಪಕ್ಷದ ನಾಯಕರಾದ ಯುವರಾಜ್ ಪುತ್ತೂರು, ಗಣೇಶ್ ನೆರ್ಗಿ, ಸತೀಶ್ ಕುಮಾರ್ ಮಂಚಿ, ಮೀನಾಕ್ಷಿ ಮಾಧವ ಬನ್ನಂಜೆ, ಸತೀಶ್ ಪುತ್ರನ್, ಶೋಭಾ ಕಕ್ಕುಂಜೆ, ಧನಂಜಯ್ ಕುಂದರ್, ಡಾ. ಸಂತೋಷ್ ಕುಮಾರ್ ಬೈರಂಪಳ್ಳಿ, ಪುರಂದರ್ ಸಾಲ್ಯಾನ್, ತುಳಸಿದಾಸ್, ಸುಂದರಿ, ಸಂಜಯ್ ಆಚಾರ್ಯ, ಉಡುಪಿ ಜಿಲ್ಲಾ ಒಕ್ಕಲಿಗ‌ ಸೇವಾ ಸಂಘದ ಅಧ್ಯಕ್ಷರಾದ ಸೀತಾರಾಮ್ ಗೌಡ, ಕಾರ್ಯದರ್ಶಿ ಹೇಮಾನಂದ್, ಮಾಜಿ ಕಾರ್ಯದರ್ಶಿ ಬಿ ಪಿ ಮಂಜುನಾಥ್, ಹಿರಿಯರಾದ ಬಾಬು ಗೌಡ, ಡಾ. ತುಕಾರಾಮ್, ಶಿವಪ್ಪ ಗೌಡ, ಕೃಷ್ಣ, ರಘುನಂದನ್, ಲಿಂಗಪ್ಪ ಗೌಡ, ವಿಕಾಸ್, ಸುರೇಶ್, ಸತೀಶ್, ಲೀಲಾವತಿ, ಕಮಲಾ ಸಿದ್ದರಾಜ್ ಗೌಡ, ಕುಸುಮಾ ಬಾಬುಗೌಡ ಸುಪ್ರಿತಾ, ಅರ್ಚನಾ ಹಾಗೂ ಇನ್ನಿತರ ಸಮಾಜದ ಕುಲಭಾಂದವರು ಉಪಸ್ಥಿತರಿದ್ದರು.

ನ್ಯೂಯಾರ್ಕ್‌ನ ಮೇಯರ್‌ ಆಗಿ ಭಾರತ ಮೂಲದ ಜೊಹ್ರಾನ್ ಮಮ್ದಾನಿ ಆಯ್ಕೆ – vishwanews24

Leave a Reply