ಭಾರತವನ್ನು “ಸ್ವಾತಂತ್ರ ಭಾರತದ ಹಿಂದೂ ರಾಷ್ಟ್ರ”ವೆಂದು ಘೋಷಿಸಬೇಕು: ಮೇಘಾಲಯ ಹೈಕೋರ್ಟ್ ನ್ಯಾಯಾಧೀಶ
ಶಿಲ್ಲಾಂಗ್ :ಪಾಕಿಸ್ತಾನ ಹೇಗೆ ಇಸ್ಲಾಮಿಕ್ ರಾಷ್ಟ್ರವೆಂದು ಕರೆದುಕೊಳ್ಳುತ್ತಿದ್ದೆಯೋ ಅದೇ ರೀತಿಯಲ್ಲಿ ಭಾರತವನ್ನೂ ಸ್ವಾತಂತ್ರ ಭಾರತದ ಹಿಂದೂ ರಾಷ್ಟ್ರವೆಂದು ಘೋಷಿಸಬೇಕಾಗಿದೆ ಎಂದು ಮೇಘಾಲಯದ ಹೈಕೋರ್ಟ್ ನ್ಯಾಯಾಧೀಶ ಸುದೀಪ್ ರಂಜನ್ ಸೇನ್ ಹೇಳಿದ್ದಾರೆ.
ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾದಿಂದ ಬಂದಿರುವ ಜನರು ಭಾರತದೊಳಗೆ ವಾಸಿಸಲು ಅವಕಾಶ ಕಲ್ಪಿಸುವ ಕಾನೂನು ಜಾರಿಗೆ ತರುವಂತೆ ನ್ಯಾಯಾಧೀಶ ರಂಜನ್ ಸೇನ್, ಪ್ರಧಾನ ಮಂತ್ರಿ, ಗೃಹ ಸಚಿವರು, ಹಾಗೂ ಮತ್ತಿತರ ಶಾಸನ ರಚನಕಾರರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಬೇರೆ ಕಡೆಯಿಂದ ಬಂದವರು ಯಾವುದೇ ಧರ್ಮಕ್ಕೆ ಸೇರಿದವರಾಗಿರಲೀ ಯಾವುದೇ ದಾಖಲೆ ಕೇಳದೆ ಅವರೆಲ್ಲರಿಗೂ ಪೌರತ್ವ ನೀಡಬೇಕು ಎಂದಿದ್ದಾರೆ. ಇಲ್ಲದಿದ್ದರೆ ಭಾರತದಲ್ಲಿಯೇ ಹುಟ್ಟಿದ್ದ ಹಿಂದೂಗಳು ಹಾಗೂ ಸಿಖ್ಖರು ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಅವರನ್ನು ದೇಶಕ್ಕೆ ವಾಪಾಸ್ ಕರೆಸಿಕೊಂಡು ಅವರಿಗೂ ಪೌರತ್ವ ನೀಡಬೇಕಾಗುತ್ತದೆ ಎಂದು ಹೇಳಿರುವುದಾಗಿ ವರದಿಯಾಗಿದೆ.
ಹಿಂದು, ಸಿಖ್, ಜೈನ, ಬೌದ್ಧ, ಕ್ರೈಸ್ತ, ಪಾರ್ಸಿ, ಖಾಸಿ, ಗರೊ ಹೀಗೆ ಎಲ್ಲರ ರಕ್ಷಣೆ ಮಾಡಲು ಬೇಕಾದ ಸೂಕ್ತ ಕಾನೂನು ತಿದ್ದುಪಡಿಯನ್ನು ಮೋದಿ ಸರ್ಕಾರ ತರುವ ಭರವಸೆ ಇದೆ. ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಿಂಡ ಬರುವ ಭಾರತೀಯ ಮೂಲದವರನ್ನು ಸ್ವಾಗತಿಸಬೇಕಿದೆ ಎಂದರು.

