ಮಂಗಳೂರು,: ಓಮಿಕ್ರಾನ್ ಕೋವಿಡ್ ವಿಚಾರದಲ್ಲಿ ಸರ್ಕಾರ ಜನರಲ್ಲಿ ಭಯ ಹುಟ್ಟಿಸಿ ಸಂಕಷ್ಟದ ಕೂಪಕ್ಕೆ ತಲ್ಲುತ್ತಿದೆ : ಯು.ಟಿ. ಖಾದರ್ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು,: ಓಮಿಕ್ರಾನ್ ಕೋವಿಡ್ ವಿಚಾರದಲ್ಲಿ ಸರ್ಕಾರ ಜನರಲ್ಲಿ ಭಯ ಹುಟ್ಟಿಸಿ ಸಂಕಷ್ಟದ ಕೂಪಕ್ಕೆ ತಲ್ಲುತ್ತಿದೆ : ಯು.ಟಿ. ಖಾದರ್ – Vishwanews24

ಮಂಗಳೂರು,: ಓಮಿಕ್ರಾನ್ ಕೋವಿಡ್ ವಿಚಾರದಲ್ಲಿ ಸರ್ಕಾರ ಜನರಲ್ಲಿ ಭೀತಿ ಸೃಷ್ಟಿಸುತ್ತಿದೆ. ಮೇಕೆದಾಟು ಯೋಜನೆ ಹೋರಾಟ ನಡೆಸದಂತೆ ಮಾಡಲು ಈ ತಂತ್ರ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಟೀಕಿಸಿದ್ದಾರೆ.

ಈ ಹಿಂದೆ ರೋಗದ ಬಗ್ಗೆ ಮಾಹಿತಿ ಇದ್ದಾಗ ಬೇರೆ ಬೇರೆ ಪಾದಯಾತ್ರೆ ಸಭೆ ಮಾಡಿದ್ದರು. ಆದ್ರೆ ಇದೀಗಾ ಮೇಕೆದಾಟಿನಿಂದ ಕರ್ನಾಟಕಕ್ಕೆ ದ್ರೋಹ ಆಗುವಾಗ ರೋಗದ ಭೀತಿ ಸೃಷ್ಟಿಸುತ್ತಿದ್ದಾರೆ. ರಾಜ್ಯ ಸರ್ಕಾರ ಇಲ್ಲಿ ರಾಜಕೀಯ ಮಾಡ್ತಾ ಇದೆ. ಜನರಲ್ಲಿ ಭಯ ಹುಟ್ಟಿಸಿ ಸಂಕಷ್ಟದ ಕೂಪಕ್ಕೆ ತಲ್ಲುತ್ತಿದೆ. ರಾಜ್ಯದಲ್ಲಿ ಓಮಿಕ್ರಾನ್ ಕೋವಿಡ್ ನ ಪಾಸಿಟಿವಿಟಿ ಎಷ್ಟು ಎಂದು ತಿಳಿಸಲಿ ಎಂದು ಅವರು ಆಗ್ರಹಿಸಿದ್ದಾರೆ.

ಮೂಡುಬಿದಿರೆ: ಹೆಡ್ ಕಾನ್ ಸ್ಟೇಬಲ್ ಹೃದಯಾಘಾತದಿಂದ ಸಾವು – Vishwanews24

ಓಮಿಕ್ರಾನ್ ಬಗ್ಗೆ ತಜ್ಞರು ನೀಡಿದ ಸಲಹೆ ಸೂಚನೆ ಜನರ ಮುಂದೆ ಇಡಲಿ. ಅದು ಬಿಟ್ಟು ರಾಜಕೀಯಕ್ಕಾಗಿ ಓಮಿಕ್ರಾನ್ ಲಾಕ್ ಡೌನ್ ಮಾಡುದು ಬೇಡ. ಎತ್ತಿನಹೊಳೆ ಯೋಜನೆ ಬಗ್ಗೆ ಬಿಜೆಪಿ ಸಂಸದರು ಶಾಸಕರು ರಸ್ತೆಯಲ್ಲಿ ಪ್ರತಿಭಟನೆ ಮಾಡಿದ್ದರು. ಆದ್ರೆ ಯಾವೊಬ್ಬರು ಸದನದಲ್ಲಿ ಧ್ವನಿ ಎತ್ತಿಲ್ಲ. ಜನರು ಪದೇ ಪದೇ ಮೂರ್ಖರಾಗಲು ಸಿದ್ದರಿಲ್ಲ. ಈಗಾಗಲೇ ನಮಗೆ ಕೇಳಿ ಕೇಳಿ ಸಾಕಾಗಿದೆ ಎಂದು ಟೀಕಿಸಿದರು.

ಕೊರೊನಾ-ಒಮಿಕ್ರಾನ್ ಭೀತಿ :  ರಾಜ್ಯದಲ್ಲಿ ಮತ್ತೆ ವೀಕೆಂಡ್ ಕರ್ಫ್ಯೂ ಜಾರಿ.. Vishwanewsws24

 

Leave a Reply