ಮಂಗಳೂರು ಕಮಿಷನರ್ ಶಶಿಕುಮಾರ್ ನೇರವಾಗಿ ಭ್ರಷ್ಟಾಚಾರದಲ್ಲಿ ಭಾಗಿ : ಕಬೀರ್ ಉಳ್ಳಾಲ್ ಗಂಭೀರ ಆರೋಪ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು ಪೊಲೀಸ್ ಕಮಿಷನರ್ ಭ್ರಷ್ಟಾಚಾರದಲ್ಲಿ ಭಾಗಿ..

ಲೋಕಾಯುಕ್ತ ದೂರುದಾರ ಕಬೀರ್ ಉಳ್ಳಾಲ್ ಗಂಭೀರ ಆರೋಪ ..

ಶಶಿಕುಮಾರ್ ಮಂಗಳೂರಿಗೆ ಬಂದ ನಂತರ ಭ್ರಷ್ಟಾಚಾರ ಹೆಚ್ಚಾಗಿದೆ..

ಮಂಗಳೂರು ಪೊಲೀಸರ ಭ್ರಷ್ಟಾಚಾರ ಬಗ್ಗೆ ಸಿಬಿಐ ತನಿಖೆಗೆ ಆಗ್ರಹ ..

ಮಂಗಳೂರು: ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ಹಿನ್ನೆಲೆ ಲೋಕಾಯುಕ್ತಕ್ಕೆ ದೂರು ನೀಡಿದ ಪ್ರಕರಣ ಸಂಬಂಧ ಮಂಗಳೂರು ಕಮಿಷನರ್ ಶಶಿಕುಮಾರ್ ವಿರುದ್ದವೇ ಲೋಕಾಯುಕ್ತ ದೂರುದಾರ ಕಬೀರ್ ಉಳ್ಳಾಲ್ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳೂರು ಕಮಿಷನರ್ ಶಶಿಕುಮಾರ್ ನೇರವಾಗಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಮಂಗಳೂರಿನ ಸಾಮಾಜಿಕ ಹೋರಾಟಗಾರ ಹಾಗೂ ಉಳ್ಳಾಲ ಪೊಲೀಸರ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಿದ ಕಬೀರ್ ಉಳ್ಳಾಲ್ ಸುದ್ದಿಗೋಷ್ಠಿ ನಡೆಸಿ ಕಮಿಷನರ್ ವಿರುದ್ದ ತನಿಖೆಗೆ ಆಗ್ರಹಿಸಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರ್ ಭ್ರಷ್ಟಾಚಾರದಲ್ಲಿ ಭಾಗಿ: ಲೋಕಾಯುಕ್ತ ದೂರುದಾರ ಕಬೀರ್ ಉಳ್ಳಾಲ್  ಆರೋಪ!

ಆರೋಪಿ ಸ್ಥಾನದಲ್ಲಿರುವ ಮಂಗಳೂರು ಕಮಿಷನರ್ ಗೆ ಲೋಕಾಯುಕ್ತ ಇಲಾಖೆ ತನಿಖೆ ಹೊಣೆ ಕೊಟ್ಟಿರುವುದು ಸರಿಯಲ್ಲ. ಉಳ್ಳಾಲ ಪೊಲೀಸರು ಮತ್ತು ಕಮಿಷನರ್ ವಿರುದ್ಧ ನಾನು ‌ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ. ಉಳ್ಳಾಲ ಇನ್ಸ್ ಪೆಕ್ಟ ರ್ ಸಂದೀಪ್, ಪಿಎಸ್‌ಐ ಹಾಗೂ ಕಮಿಷನರ್ ಶಶಿಕುಮಾರ್ ವಿರುದ್ದವೂ ದೂರಿನಲ್ಲಿ ಉಲ್ಲೇಖವಿದೆ. ಆದರೆ ಲೋಕಾಯುಕ್ತರು ಕಮಿಷನರ್ ಶಶಿಕುಮಾರ್ ಗೆ ನನ್ನ ದೂರಿನ ಬಗ್ಗೆ ತನಿಖಾ ವರದಿ ಸಲ್ಲಿಸಲು ಸೂಚಿಸಿದ್ದಾರೆ. ತನಿಖಾ ವರದಿ ಸಲ್ಲಿಸಲು ಕಮಿಷನರ್ ಗೆ ನೋಟೀಸ್ ನೀಡಿದ್ದರು. ಆದರೆ ನನ್ನ ದೂರಿನಲ್ಲಿ ಆರೋಪಿ ಸ್ಥಾನದಲ್ಲಿರುವ ಕಮಿಷನರ್ ತನಿಖೆ ಮಾಡುವುದು ಸರಿಯಲ್ಲ. ಈ ಬಗ್ಗೆ‌ ಲೋಕಾಯುಕ್ತದಲ್ಲಿ ನ್ಯಾಯ ಸಿಗದೇ ಇದ್ದರೆ ಹೈಕೋರ್ಟ್ ಮೆಟ್ಟಿಲೇರುತ್ತೇನೆ.

ಶಿರ್ವ: ಬಚ್ಚಲು ಮನೆ ಸಹಿತ ಅಡುಗೆ ಕೋಣೆಗೆ ತಗುಲಿದ ಬೆಂಕಿ : ಅಪಾರ ಹಾನಿ – Vishwanews24

ಲೋಕಾ ಸ್ವತಂತ್ರ ತನಿಖೆ ನಡೆಸಲಿ

ನಾನು ಕೊಟ್ಟ ದೂರಿನ ಬಗ್ಗೆ ಲೋಕಾಯುಕ್ತ ಸ್ವತಂತ್ರ ತನಿಖೆ ನಡೆಸಲಿ. ಕಮಿಷನರ್ ಶಶಿಕುಮಾರ್ ತನಿಖೆ ನಡೆಸುವುದಾದರೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸುತ್ತೇನೆ. ಸದ್ಯ ಲೋಕಾಯುಕ್ತಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಕಿರುಕುಳ ನೀಡ್ತಾ ಇದ್ದಾರೆ. ಮನೆಗೆ ಎಸಿಪಿ, ಇನ್ಸ್ಪೆಕ್ಟರ್ ಹಾಗೂ ಪೊಲೀಸರು ಬಂದು ಕಿರುಕುಳ ನೀಡ್ತಾ ಇದಾರೆ. ನಾನು ದೂರು ಕೊಟ್ಟಿರೋದು ಲೋಕಾಯುಕ್ತಕ್ಕೆ‌. ಹೀಗಾಗಿ ‌ಕಮಿಷನರ್ ಅಥವಾ ಬೇರೆ ಪೊಲೀಸರ ವಿಚಾರಣೆಗೆ ಹೋಗುವ ಅಗತ್ಯವಿಲ್ಲ‌. ಲೋಕಾಯುಕ್ತ ವಿಚಾರಣೆಗೆ ಕರೆದರೆ ನಾನು ಹೋಗುತ್ತೇನೆ‌. ಮಂಗಳೂರು ಪೊಲೀಸರ ಭ್ರಷ್ಟಾಚಾರ ಬಗ್ಗೆ ಸಿಬಿಐ ತನಿಖೆಯಾಗಲಿ. ಡ್ರಗ್ ಕೇಸ್, ವೇಶ್ಯಾವಾಟಿಕೆ ಹಾಗೂ ಚಿನ್ನಾಭರಣ ದರೋಡೆ ಕೇಸ್ ಸಿಬಿಐ ತನಿಖೆಯಾಗಲಿ.

ಮುಂಬೈ: ನಟಿ ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿ ಬಂಧನ – Vishwanews24

ಅವರೇ ಠಾಣೆಗೆ ಕರೆಯೋದು ಅಂದ್ರೆ ಏನರ್ಥ?

ಮಂಗಳೂರು ಕಮಿಷನರ್ ಶಶಿಕುಮಾರ್ ನೇರವಾಗಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಅವರ ವಿರುದ್ದವೇ ದೂರು ಕೊಟ್ಟ ಮೇಲೆ ಅವರೇ ನನ್ನನ್ನ ಠಾಣೆಗೆ ಕರೆಯೋದು ಅಂದ್ರೆ ಏನರ್ಥ? ನನಗೆ ಮಾನಸಿಕ ಕಿರುಕುಳದ ಬಗ್ಗೆ ಲೋಕಾಯುಕ್ತ ಹಾಗೂ ಡಿಜಿಪಿಗೆ ದೂರು ನೀಡಿದ್ದೇನೆ. ಶಶಿಕುಮಾರ್ ಮಂಗಳೂರಿಗೆ ಬಂದ ನಂತರ ಭ್ರಷ್ಟಾಚಾರ ಹೆಚ್ಚಾಗಿದೆ. ಠಾಣೆಗಳಲ್ಲಿ ಇನ್ಸ್ಪೆಕ್ಟರ್ ಗಳಿಗೆ ಭಯ ಇಲ್ಲದೇ ಹಣ ಮಾಡ್ತಾ ಇದಾರೆ. ನಾನು ಕಮಿಷನರ್ ವಿರುದ್ದ ದೂರು ಕೊಟ್ಟಿದ್ದೇನೆ. ಹೀಗಿರುವಾಗ ಕಮಿಷನರ್ ಬಳಿ ವಿಚಾರಣೆಗೆ ಹೋಗಿ ನನ್ನತ್ರ ಇರೋ ಸಾಕ್ಷ್ಯ ಕೊಟ್ಟರೆ ಅವರು ನಾಶಪಡಿಸಲ್ವಾ? ಹಾಗಾಗಿ ನಾನು ಕಮಿಷನರ್ ಕರೆಯೋ ವಿಚಾರಣೆಗೆ ಹಾಜರಾಗಲ್ಲ ಎಂದು ತಿಳಿಸಿದ್ದಾರೆ.

Leave a Reply