ಮಂಗಳೂರು : ಜ. 21 ರಂದು ತುಳು ಕೊಡವ ಭಾಷೆಗಳ ಅಳಿವು ಉಳಿವು ಪುಸ್ತಕ ಬಿಡುಗಡೆ ಸಮಾರಂಭ – VIshwanews24

Featured, ದಕ್ಷಿಣ ಕನ್ನಡ

ಮಂಗಳೂರು : ಜ. 21 ರಂದು ತುಳು ಕೊಡವ ಭಾಷೆಗಳ ಅಳಿವು ಉಳಿವು ಪುಸ್ತಕ ಬಿಡುಗಡೆ ಸಮಾರಂಭ – VIshwanews24

ಮಂಗಳೂರು: “ತುಳು ಕೊಡವ” ಭಾಷೆಗಳು ರಾಜ್ಯದ ಅತ್ಯಂತ ಪ್ರಾಚೀನ ಭಾಷೆಗಳು. ಈ ಭಾಷೆಗಳನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸ ಬೇಕೆಂದು ಆಗ್ರಹಿಸಿ ಸಂಸತ್ತಿನಲ್ಲಿ ಬಿ ಕೆ ಹರಿಪ್ರಸಾದ್ ಅವರು ನಿರಂತರವಾಗಿ ಆಗ್ರಹವನ್ನು ಮಾಡಿದ್ದರು.

ಅವರ ಭಾಷಣದ ಭಾಗವಾದ ತುಳು ಕೊಡುವ ಭಾಷೆಗಳ ಕುರಿತಾದ ಪುಸ್ತಕ ತುಳು ಕೊಡವ ಭಾಷೆಗಳ ಅಳಿವು ಉಳಿವು ದ ಬಿಡುಗಡೆ ಸಮಾರಂಭ ಶುಕ್ರವಾರ ಜನವರಿ 21, 2022 ರಂದು ಸಂಜೆ 3 ಗಂಟೆಗೆ ಮಂಗಳೂರಿನ ಸಹೋದಯ, ಇನ್ಸ್ಟಷನ್‌ ಆಫ್‌ ಕರ್ನಾಟಕ ಕ್ರಿಶ್ಚಿಯನ್‌ ಎಜುಕೇಷನ್‌ ಸೊಸೈಟಿ, ಬಲ್ಮಠ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನಪರಿಷತ್‌ ಸದಸ್ಯರು ಮತ್ತು ಮಾಜಿ ಸಂಸದರಾದ ಶ್ರೀ. ಬಿ.ಕೆ ಹರಿಪ್ರಸಾದ್‌ ವಹಿಸಲಿದ್ದಾರೆ. ಜಾನಪದ ವಿದ್ವಾಂಸರು ಹಾಗೂ ವಿಶ್ರಾಂತ ಕುಲಪತಿಗಳಾದ ಪ್ರೊ. ಕೆ ಚಿನ್ನಪ್ಪಗೌಡ ಅವರು ಪುಸ್ತಕವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಾರ್ತಾಭಾರತಿ ದಿನ ಪತ್ರಿಕೆ ಸಂಪಾದಕರಾದ ಅಬ್ದುಸ್ಸಲಾಂ ಪುತ್ತಿಗೆ ಇರಲಿದ್ದಾರೆ. ಹಿರಿಯ ಪತ್ರಕರ್ತ ಹಾಗೂ ಕೃತಿ ಸಂಪಾದಕರಾದ ಆರ್‌ ಜಯಕುಮಾರ್‌ ಉಪಸ್ಥಿತರಿಲಿದ್ದಾರೆ.

ವೀಕೆಂಡ್ ಕರ್ಪ್ಯೂ, ನೈಟ್ ಕರ್ಪ್ಯೂ : ನಾಳೆ ಮುಖ್ಯಮಂತ್ರಿ ಬೊಮ್ಮಾಯಿ ಮಹತ್ವದ ಸಭೆ – Vishwanews24

 

Leave a Reply