ಮಂಗಳೂರು: ತಣ್ಣೀರು ಬಾವಿ ಕಡಲ‌ ಕಿನಾರೆಯಲ್ಲಿ ಸ್ನಾನಕ್ಕೆಂದು ಇಳಿದಿದ್ದ ಯುವಕ ಅಲೆಗಳ ಹೊಡೆತಕ್ಕೆ ನೀರುಪಾಲು – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ತಣ್ಣೀರು ಬಾವಿ ಕಡಲ‌ ಕಿನಾರೆಯಲ್ಲಿ ಸ್ನಾನಕ್ಕೆಂದು ಇಳಿದಿದ್ದ  ಯುವಕ 

ಅಲೆಗಳ ಹೊಡೆತಕ್ಕೆ ನೀರುಪಾಲು

ಮಂಗಳೂರು: ಸ್ನಾನಕ್ಕೆಂದು ಸಮುದ್ರಕ್ಕೆ ಇಳಿದಿದ್ದ ಯುವಕನೋರ್ವ ಅಲೆಗಳ ಹೊಡೆತಕ್ಕೆ ನೀರುಪಾಲಾಗಿರುವ ಘಟನೆ ನಗರದ ಹೊರವಲಯದ ತಣ್ಣೀರು ಬಾವಿ ಕಡಲ‌ ಕಿನಾರೆಯಲ್ಲಿ ಆ.19ರ ಶುಕ್ರವಾರ ಮಧ್ಯಾಹ್ನ‌‌ ನಡೆದಿದೆ.

ನೀರುಪಾಲಾದ ಯುವಕನನ್ನು ತಣ್ಣೀರುಬಾವಿ ನಿವಾಸಿ ಮುಹಮ್ಮದ್ ಕೈಫ್(19) ಎಂದು ತಿಳಿದು ಬಂದಿದೆ.

ಈತ ಶುಕ್ರವಾರ ಮಧ್ಯಾಹ್ನ ಮನೆಯ ಸಮೀಪದ ತಣ್ಣೀರುಬಾವಿ ಕಡಲಿನಲ್ಲಿ ಸ್ನಾನಕ್ಕೆಂದು ತೆರಳಿದ್ದು , ಈ ವೇಳೆ ಸಮುದ್ರದ ಬೃಹತ್ ಅಲೆಗಳ ಹೊಡೆತಕ್ಕೆ ಸಿಲುಕಿ ನೀರು ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.

Leave a Reply