ಮಂಗಳೂರು: ನಗರದ ಬಸ್ ಗಳಲ್ಲಿ ಅಳವಡಿಸಿರುವ ಕರ್ಕಶ ಹಾರ್ನ್ ವಿರುದ್ಧ ಪೊಲೀಸರಿಂದ ವಿಶೇಷ ಕಾರ್ಯಾಚರಣೆ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ನಗರದ ಬಸ್ ಗಳಲ್ಲಿ ಅಳವಡಿಸಿರುವ ಕರ್ಕಶ ಹಾರ್ನ್ ವಿರುದ್ದ ಆ. 21 ರ ಮಂಗಳವಾರ ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸಿ ಒಟ್ಟು 68 ಹಾರ್ನ್ ಗಳನ್ನು ತೆರವು ಮಾಡಿದರು.

ನಗರದ ಆರ್.ಟಿ.ಓ , ಬಿಜೈ ರಸ್ತೆ ಫಳ್ನೀರ್ ಪಂಪ್ ವೆಲ್ , ಬೈಕಂಪಾಡಿ, ಮೊದಲಾದ ಕಡೆ ಕಾರ್ಯಾಚರಣೆ ನಡೆಸಲಾಯಿತು. ಈ ಹಿಂದೆಯೂ ಹಲವು ಬಾರಿ ಬಸ್ ಗಳಲ್ಲಿ ಅಳವಡಿಸಿದ್ದ ಕರ್ಕಳ ಹಾರ್ಣ್ ಗಳನ್ನು ತೆರವು ಮಾಡಲಾಗಿತ್ತು. ಆದರೆ ಬಸ್ ಚಾಲಕರು ಮತ್ತೆ ಕರ್ಕಶ ಹಾರ್ನ್ ಗಳನ್ನ ಮತ್ತೆ ಅಳವಡಿಸಿದ್ದು, ಅವರಿಗೆ ಎಚ್ಚರಿಕೆ ನೀಡಲಾಗಿದೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿರುವ ಹರ್ಷ ಅವರು, ‘ಕರ್ಕಶ ಹಾರ್ನ್ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ನಡೆಸಲಾಗಿದ್ದು ಇನ್ನು ಮಂಗಳೂರು ಸ್ವಲ್ಪ ಮಟ್ಟಿಗೆ ಶಾಂತವಾಗಬಹುದು ಎಂದು ಬರೆದುಕೊಂಡಿದ್ದಾರೆ.’

ಕಂಕನಾಡಿ ಕದ್ರಿ ಪಾಂಡೇಶ್ವರ ಸುರತ್ಕಲ್ ಸಂಚಾರ ಪೊಲೀಸರು ಏಕಕಾಲದಲ್ಲಿ ಎಲ್ಲಾ ಕಡೆ ಕಾರ್ಯಾಚರಣೆ ನಡೆಸಿದ್ದಾರೆ.