ಮಂಗಳೂರು : ನನಗೆ ಅಪಮಾನ ಮಾಡಿದವರನ್ನು ಒಂದು ತಿಂಗಳ ಒಳಗೆ ಬೀದಿಯಲ್ಲಿ ಹುಚ್ಚರಂತೆ ಓಡಿಸುವೆ : ಕೊರಗಜ್ಜನ ನುಡಿ -Vishwanews24
ಮಂಗಳೂರು : ನನಗೆ ಅಪಮಾನ ಮಾಡಿದವರನ್ನು ಒಂದು ತಿಂಗಳ ಒಳಗೆ ಬೀದಿಯಲ್ಲಿ ಹುಚ್ಚರಂತೆ ಓಡಿಸುವೆ : ಕೊರಗಜ್ಜನ ನುಡಿ -Vishwanews24
ಮಂಗಳೂರು : ತುಳುನಾಡ ಅರಾಧ್ಯ ದೈವ ಕೊರಗಜ್ಜನಿಗೆ ಮದುವೆ ಕಾರ್ಯಕ್ರಮದಲ್ಲಿ ಅವಮಾನ ಮಾಡಿದ ದೈವದ ಮುಂದೆ ಭಕ್ತರು ತಂದಿದ್ದು, ನನಗೆ ಅವಮಾನ ಮಾಡಿದವರನ್ನು ಒಂದು ತಿಂಗಳ ಒಳಗೆ ಬೀದಿಯಲ್ಲಿ ಹುಚ್ಚರಂತೆ ಓಡಿಸುವೆ ಎಂದು ಕೊರಗಜ್ಜ ದೈವ ನುಡಿ ಕೊಟ್ಟಿದೆ.
ಅತ್ತಾವರದಲ್ಲಿ ನಡೆದ ಕೊರಗಜ್ಜ ನೇಮದಲ್ಲಿ ವಿಟ್ಲದಲ್ಲಿ ಅನ್ಯಧರ್ಮಿಯರಿಂದ ಕೊರಗಜ್ಜನಿಗೆ ಆದ ಅವಮಾನದ ವಿಚಾರವನ್ನು ದೈವದ ಮುಂದೆ ಭಕ್ತರು ಕೇಳಿದ್ದು, ಕೊರಗಜ್ಜ ದೈವ ತನ್ನ ಭಕ್ತರಿಗೆ ಅಭಯವನ್ನು ನೀಡಿದ್ದು, ನನಗೆ ಅವಮಾನ ಮಾಡಿದವರನ್ನು ಒಂದು ತಿಂಗಳ ಒಳಗೆ ಬೀದಿಯಲ್ಲಿ ಹುಚ್ಚರಂತೆ ಓಡಿಸುವೆ ಎಂದು ಹೇಳಿದೆ.
ಉಪ್ಪಳದ ಯುವಕನ ಜೊತೆ ಕೊಳ್ನಾಡು ಗ್ರಾಮದ ಅಝೀಝ್ ಎಂಬವರ ಮಗಳ ಮದುವೆ ನಿಶ್ಚಯವಾಗಿತ್ತು. ವಧುವಿನ ಮನೆಗೆ ರಾತ್ರಿ ವರನ ಸ್ನೇಹಿತರ ಬಳಗ ಆಗಮಿಸಿತ್ತು. ಈ ವೇಳೆ ವರ ಕೊರಗಜ್ಜನ ವೇಷ-ಭೂಷಣ ಧರಿಸಿ ಬಂದಿದ್ದ. ತಲೆಗೆ ಅಡಿಕೆ ಹಾಳೆ ಟೋಪಿ, ಮುಖಕ್ಕೆ ಕಪ್ಪು ಬಣ್ಣ ಹಚ್ಚಿಕೊಂಡು ಬಂದಿದ್ದ. ವರ ಹಾಗೂ ತಂಡ ವಧುವಿನ ಮನೆ ಮುಂದಿನ ರಸ್ತೆಯಲ್ಲಿ ಹಾಡು ಹೇಳಿ ಕುಣಿಯುತ್ತಾ ಬಂದಿತ್ತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಮದುವೆ ಸಮಾರಂಭದಲ್ಲಿ ಕೊರಗಜ್ಜನಿಗೆ ಅವಹೇಳನ ಖಂಡನೀಯ : ಅಕ್ಷಿತ್ ಸುವರ್ಣ -Vishwanews24
